ಬಿಜೆಪಿ ಪರ ಪ್ರಚಾರಕ್ಕಿಳಿದ ನಟ ದರ್ಶನ್:‌ ಕೆಜಿಎಫ್‌, ಬಂಗಾರಪೇಟೆಯಲ್ಲಿ ರೋಡ್‌ ಶೋ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜ್ಯದಲ್ಲಿ ಚುನಾವಣೆ ಕಾವು ಹೆಚ್ಚಾಗಿದ್ದು, ರಾಜಕೀಯ ನಾಐಕರ ಪರವಾಗಿ ಸಿನಿಮಾ ನಟ/ನಟಿಯರು ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ ಸ್ಟಾರ್‌ ನಟ ಸುದೀಪ್‌ ಈಗಾಗಲೇ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಪ್ರಚಾಋ ಶುರು ಮಾಡಿದ್ದು, ನಟ ದರ್ಶನ್‌ ಕೂಡ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇಂದು ದರ್ಶನ್‌ ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಲವು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಈ ಕುರಿತು ರಾಜ್ಯ ಬಿಜೆಪಿ ದರ್ಶನ್‌ ಪ್ರಚಾರದ ರೂಪುರೇಷೆ ಪ್ರಕಟಿಸಿದ್ದು, ಯಾಔ ಯಾಔ ಸಮಯದಲ್ಲಿ, ಯಾವ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ ಎಂಬುದರ ಕುರಿತು ಟ್ವೀಟ್‌ ಮಾಡಿದ್ದಾರೆ.

ದರ್ಶನ ಪ್ರಚಾರದ ರೂಪುರೇಷೆ ಇಲ್ಲಿದೆ

  • ಇಂದು ಬೆಳಗ್ಗೆ 10 ಗಂಟೆಗೆ ಕೋಲಾರ ಜಿಲ್ಲೆಯ ಕೆಜಿಎಫ್‌ನಲ್ಲಿ ರೋಡ್‌ ಶೋ
  • ಬೆಳಗ್ಗೆ 11 ಗಂಟೆಗೆ ಬಂಗಾರಪೇಟೆಯಲ್ಲಿ ರೋಡ್‌ ಶೋ
  • ಮಧ್ಯಾಹ್ನ 12 ಗಂಟೆಗೆ ಕೋಲಾರ ಮತ ಕ್ಷೇತ್ರದಲ್ಲಿ ರೋಡ್‌ ಶೋ
  • ಮಧ್ಯಾಹ್ನ 3 ಗಂಟೆಗೆ ಮಾಲೂರಿನಲ್ಲಿ ರೋಡ್‌ ಶೋ
  • ಸಂಜೆ 4ಕ್ಕೆ ಬೆಂಗಳೂರು ಗ್ರಾ. ಹೊಸಕೋಟೆಯಲ್ಲಿ ರೋಡ್‌ ಶೋ
  • ಸಂಜೆ 5ಕ್ಕೆ ವಿಜಯಪುರ ಮತ್ತು ದೇವನಹಳ್ಳಿ ಕ್ಷೇತ್ರದಲ್ಲಿ ರೋಡ್‌ ಶೋ
  • ಸಂಜೆ 6 ಗಂಟೆಗೆ ದೇವನಹಳ್ಳಿ ಕ್ಷೇತ್ರದಲ್ಲಿ ರೋಡ್‌ ಶೋ
  • ಸಂಜೆ 7 ಗಂಟೆಗೆ ದೊಡ್ಡ ಬಳ್ಳಾಪುರ ಕ್ಷೇತ್ರ, 8 ಗಂಟೆಗೆ ನೆಲಮಂಗಲ ಕ್ಷೇತ್ರದಲ್ಲಿ ರೋಡ್‌ ಶೋ ನಡೆಸಲಿದ್ದಾರೆ.

ಒಟ್ಟು ಒಂಬತ್ತು ಕ್ಷೇತ್ರಗಳಲ್ಲಿ ಇಂದು ಚಾಲೆಂಜಿಂಗ್‌ ಸ್ಟಾರ್‌ ನಟ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ಪ್ರಚಾರ ನಡೆಸಲಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!