ಏಕನಾಥ್ ಶಿಂಧೆ ‘ಮಹಾ ಸಿಎಂ’ ಆದ ರಹಸ್ಯ ಬಹಿರಂಗಪಡಿಸಿದ ಡಿಸಿಎಂ ದೇವೇಂದ್ರ ಫಡ್ನವೀಸ್!

ಹೊಸ ದಿಗಂತ ಡಿಜಿಟಲ್ ಡೆಸ್ಕ್

‘ಮಹಾ’ ಸಿಎಂಯಾಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿ ದಿನಗಳು ಕಳೆದಿದ್ದು, ಇದೀಗ ಮುಖ್ಯಮಂತ್ರಿ ಆಯ್ಕೆಯ ಕುರಿತು ಡಿಸಿಎಂ ದೇವೇಂದ್ರ ಫಡ್ನವೀಸ್ ನಾನಾ ವಿಚಾರಗಳನ್ನು ಹೇಳಿದ್ದಾರೆ.
ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರನ್ನು ಮಾಡಿದ್ದು ನಾನೇ ಎಂದು ಡಿಸಿಎಂ ದೇವೇಂದ್ರ ಫಡ್ನವೀಸ್ ಹೇಳಿದ್ದಾರೆ. ಈ ಕುರಿತು ಕೇಂದ್ರ ಬಿಜೆಪಿ ನಾಯಕತ್ವಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೆ. ಆ ಬಳಿಕ ನಾನು ಪಕ್ಷದ ವರಿಷ್ಠರ ಆದೇಶದ ಮೇರೆಗೆ ನಾನು ಉಪ ಮುಖ್ಯಮಂತ್ರಿ ಸ್ಥಾನ ಒಪ್ಪಿಕೊಂಡೆ ಎಂದು ದೇವೇಂದ್ರ ಫಡ್ನವಿಸ್ ಹೇಳಿದ್ದಾರೆ.
ಮಹಾರಾಷ್ಟ್ರ ಹೊಸ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ನೇಮಕಗೊಂಡ ನಂತರ ಅವರ ತವರು ನಗರಕ್ಕೆ ಇಂದು ಮೊದಲ ಭೇಟಿ ನೀಡಿ ಫಡ್ನವಿಸ್ , ರೋಚಕ ಮಾಹಿತಿಯನ್ನು ನೀಡಿದ್ದಾರೆ.
ಶಿಂಧೆ ಅವರನ್ನು ಸಿಎಂ ಮಾಡುವುದು ನನ್ನ ಪ್ರಸ್ತಾಪವಾಗಿತ್ತು. ಶಿಂಧೆ ಯಶಸ್ವಿ ಸಿಎಂ ಆಗುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ತಿಳಿಸಿದ್ದಾರೆ.
ನಾನು ಮನವಿ ಮಾಡಿದ್ದರೆ ಸಿಎಂ ಆಗಬಹುದಿತ್ತು. ಸಿದ್ದಾಂತಕ್ಕಾಗಿ ಶಿವಸೇನೆಯವರನ್ನು ಸಿಎಂ ಮಾಡಿದ್ದೇವೆ. ಶಿಂಧೆ ಅವರನ್ನು ಸಿಎಂ ಮಾಡಬೇಕೆಂಬುದು ನನ್ನ ಪ್ರಸ್ತಾಪವಾಗಿತ್ತು. ಆದರೆ, ನಾನು ಸರ್ಕಾರದಿಂದ ಹೊರಗುಳಿದರೆ ಆಡಳಿತ ನಡೆಸಲು ಸರಿಯಾಗಲ್ಲ ಎಂದು ಪಕ್ಷದ ಹಿರಿಯ ನಾಯಕರು ಪಟ್ಟು ಹಿಡಿದಿದ್ದರಿಂದ ಅವರ ಆದೇಶದ ಮೇರೆಗೆ ನಾನು ಡಿಸಿಎಂ ಆಗಲು ಒಪ್ಪಿಕೊಂಡೆ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!