ಹೊಸದಿಗಂತ ವರದಿ ವಿಜಯಪುರ:
ಸಿಡಿಲು ಬಡಿದು 2 ಆಡು ಸೇರಿ 14 ಕುರಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.
ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ಧೋಂಡಿಬಾ ಮಲ್ಲಾರಿ ಸೆಂಡಿಗೆ ಎಂಬವರಿಗೆ ಸೇರಿದ, 2 ಆಡು, 12 ಉಣ್ಣಿಕುರಿ ಸಿಡಿಲಿಗೆ ಬಲಿಯಾಗಿವೆ.
ಘಟನಾಸ್ಥಳಕ್ಕೆ ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣೆಯ ಪಿಎಸ್ ಐ ಡಿ.ಎಂ.ಸಂಗಾಪೂರ, ಎಎಸ್ ಐ ಎಲ್.ಡಿ.ರೂಡಗಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.