ಸಿಡಿಲು ಬಡಿದು 2 ಆಡು, 12 ಕುರಿ ಸಾವು

ಹೊಸದಿಗಂತ ವರದಿ ವಿಜಯಪುರ:

ಸಿಡಿಲು ಬಡಿದು 2 ಆಡು ಸೇರಿ 14 ಕುರಿಗಳು ಸಾವಿಗೀಡಾದ ಘಟನೆ ಜಿಲ್ಲೆಯ ಕೊಲ್ಹಾರ ತಾಲೂಕಿನ ಮಸೂತಿ ಗ್ರಾಮದಲ್ಲಿ ನಡೆದಿದೆ.

ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದ ಧೋಂಡಿಬಾ ಮಲ್ಲಾರಿ ಸೆಂಡಿಗೆ ಎಂಬವರಿಗೆ ಸೇರಿದ, 2 ಆಡು, 12 ಉಣ್ಣಿಕುರಿ ಸಿಡಿಲಿಗೆ ಬಲಿಯಾಗಿವೆ.

ಘಟನಾಸ್ಥಳಕ್ಕೆ ಕೂಡಗಿ ಎನ್ ಟಿಪಿಸಿ ಪೊಲೀಸ್ ಠಾಣೆಯ ಪಿಎಸ್ ಐ ಡಿ.ಎಂ.ಸಂಗಾಪೂರ, ಎಎಸ್ ಐ ಎಲ್.ಡಿ.ರೂಡಗಿ ಮತ್ತು ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!