ಶೀತಗಾಳಿ, ದಟ್ಟ ಮಂಜಿಗೆ ಉತ್ತರ ಭಾರತ ತತ್ತರ: 7 ಡಿಗ್ರಿಗೆ ಇಳಿದ ಕನಿಷ್ಠ ತಾಪಮಾನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕೊರೆಯುವ ಚಳಿ ಮತ್ತು ಮಂಜಿನ ಸ್ಥಿತಿಯು ಗುರುವಾರ ರಾಷ್ಟ್ರ ರಾಜಧಾನಿಯಲ್ಲಿ ಮುಂದುವರಿದಿದ್ದು ಸಫ್ದರ್‌ಜಂಗ್ ನಿಲ್ದಾಣದಲ್ಲಿ 7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಭಾರತೀಯ ಹವಾಮಾನ ಇಲಾಖೆ (IMD) ಕೂಡ ಇಂದು ಬೆಳಗ್ಗೆ 8.30 ರ ಹೊತ್ತಿಗೆ ಪಾಲಂನಲ್ಲಿ 9.7 ಡಿಗ್ರಿ ಸೆಲ್ಸಿಯಸ್ ತಾಪಮಾನವನ್ನು ದಾಖಲಿಸಿದೆ.

IMD ಪ್ರಕಾರ, ವಾಯುವ್ಯ ಭಾರತದಲ್ಲಿ ದಟ್ಟವಾದ ಮಂಜು ಮತ್ತು ಶೀತ ದಿನದ ಪರಿಸ್ಥಿತಿಗಳು ಮುಂದಿನ 48 ಗಂಟೆಗಳ ಕಾಲ ಕಡಿಮೆಯಾದರೂ ಡಿಸೆಂಬರ್ 31 ರಿಂದ ಮತ್ತೆ ದಟ್ಟವಾದ ಮಂಜು ಮತ್ತು ಶೀತ ಅಲೆ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಜಮ್ಮು ಮತ್ತು ಕಾಶ್ಮೀರ, ಲೇಹ್ ಮತ್ತು ಹಿಮಾಚಲ ಪ್ರದೇಶದಲ್ಲಿ ತಾಜಾ ಹಿಮಪಾತಕ್ಕೆ ದಾರಿ ಮಾಡಿಕೊಡುತ್ತದೆ. ಉತ್ತರ ಪಂಜಾಬ್‌ನಲ್ಲಿ ತುಂತುರು ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಷ್ಟ್ರೀಯ ರಾಜಧಾನಿಯು ಶೀತ ಅಲೆ ಮತ್ತು ಮಂಜಿನ ಪರಿಸ್ಥಿತಿಯಲ್ಲಿ ತತ್ತರಿಸಿ, ದೈನಂದಿನ ಜೀವನವನ್ನು ಅಡ್ಡಿಪಡಿಸಿದೆ. ಮಂಜು ಕವಿದ ವಾತಾವರಣದಿಂದಾಗಿ ಹಲವಾರು ರೈಲುಗಳು ವಿಳಂಬಗೊಂಡಿದ್ದರಿಂದ ಪ್ರಯಾಣಿಕರು ಸಾಕಷ್ಟು ತೊಂದರೆ ಎದುರಿಸುತ್ತಿದ್ದಾರೆ ಎಂದು ರೈಲ್ವೆ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಭಾರತದ ಹವಾಮಾನ ಇಲಾಖೆ ಪ್ರಕಾರ, ಇಡೀ ಉತ್ತರ ಭಾರತವು ಪ್ರಸ್ತುತ ಶೀತ ಅಲೆ ಮತ್ತು ದಟ್ಟವಾದ ಮಂಜಿನ ಪರಿಸ್ಥಿತಿಗಳಿಗೆ ಸಾಕ್ಷಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!