ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರಲ್ಲೊಬ್ಬರಾದ ಸಂಸ್ಕಾರ ಭಾರತಿಯ ಪೋಷಕರಾದ ಪದ್ಮಶ್ರೀ ಪುರಸ್ಕೃತ ಯೋಗೀಂದ್ರ ಜೀ ಅವರು ನಿಧನರಾಗಿದ್ದಾರೆ. ರಾಷ್ಟ್ರ ಸೇವೆಗೆ ತಮ್ಮ ಜೀವನ ಮುಡಿಪಾಗಿಟ್ಟ ಅವರ ನಿಧನದ ಕುರಿತು ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಆರೆಸ್ಸೆಸ್ ಸರಸಂಘ ಚಾಲಕರಾದ ಡಾ. ಮೋಹನ್ ಭಾಗ್ವತ್ ಹಾಗೂ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆಯವರು ಸಂತಾಪ ಸೂಚಿಸಿದ್ದು “ಸಂಸ್ಕಾರಭಾರತಿಯ ಸಂರಕ್ಷಕರಾಗಿದ್ದ ಶ್ರೀ ಯೋಗಿಂದ್ರ ಜೀ ಅವರ ನಿಧನವು ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಅವರೊಬ್ಬ ತಪಸ್ವಿಯಾಗಿದ್ದರು. ಸಂಗೀತ ಮತ್ತು ಕಲಾಕ್ಷೇತ್ರಗಳ ಸಾಧಕರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸಿದ್ದು ಅವರ ಜೀವಮಾನದ ಶ್ರೇಷ್ಠ ಸಾಧನೆಯಾಗಿದೆ. ಪದ್ಮಶ್ರೀ ಪುರಸ್ಕೃತ ಯೋಗೇಂದ್ರ ಜೀವ ಅವರ ಜೀವನವು ಎಲ್ಲರಿಗೂ ಪ್ರೇರಣಾದಾಯಿಯಾದದ್ದು. ಅವರ ಆತ್ಮಕ್ಕೆ ಸದ್ಗತಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇವೆ” ಎಂದು ಶ್ರದ್ಧಾಂಜಲಿ ಸಲ್ಲಿಸಲಾಗಿದೆ.