ದಿನಭವಿಷ್ಯ| ಕಠೋರ ನಿಲುವು ಬೇಡ, ಸಾಮರಸ್ಯ ಜೀವನದತ್ತ ಹೆಜ್ಜೆಯಿಡಿ

ಮೇಷ
ವೃತ್ತಿಯಲ್ಲಿ ಹೆಚ್ಚು ತಾಳ್ಮೆಯಿಂದ ಕಾರ್ಯ ನಿರ್ವಹಿಸಬೇಕು. ಸಂಬಂಧ ಉಳಿಸಲು ಹೊಂದಾಣಿಕೆಗೆ ಮುಂದಾಗಬೇಕು. ಕಠೋರ ನಿಲುವು ಬೇಡ.

ವೃಷಭ
ನಿಮ್ಮ ಕೆಲಸವನ್ನು ಕ್ಷಿಪ್ರವಾಗಿ ನೆರವೇರಿಸಿ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಲಾಭ. ಇತರರ ಸಮಸ್ಯೆ ಅರಿತುಕೊಂಡು ಅವರಿಗೆ ಸ್ಪಂದಿಸುವಿರಿ.

ಮಿಥುನ
ಉದ್ಯೋಗದಲ್ಲಿ ಉನ್ನತಿ. ತೃಪ್ತಿಕರ ಆರ್ಥಿಕ ಪ್ರಗತಿ. ಉದ್ಯಮದಲ್ಲಿ ಸುಗಮ ವ್ಯವಹಾರ. ಕೌಟುಂಬಿಕ ಪರಿಸರವೂ ಹರ್ಷದಾಯಕ. ಬಂಧುಗಳ ಭೇಟಿ.

ಕಟಕ
ಮಾನಸಿಕ ಒತ್ತಡ. ಇದರಿಂದಾಗಿ ನಿಮ್ಮ ಕೆಲಸದಲ್ಲಿ ಪೂರ್ಣ ಗಮನ ಕೇಂದ್ರೀಕರಿಸಲು ಸಾಧ್ಯವಾಗದು. ಅನವಶ್ಯ ಕಾರ್ಯಕ್ಕೆ ಹಣ ವ್ಯಯವಾಗುವುದು.

ಸಿಂಹ
ಅದೃಷ್ಟವನ್ನು ನಂಬಿ ಕೂರದಿರಿ. ನಿಮ್ಮ ಏಳಿಗೆಗೆ ನೀವು ಕಠಿಣ ಪರಿಶ್ರಮ ಪಡಬೇಕಾಗಿರುವುದೂ ಅಗತ್ಯ. ದುಂದುವೆಚ್ಚ ಮಾಡಿ ಬಳಿಕ ಕೊರಗುವ ಸ್ಥಿತಿ ಬಂದೀತು.

ಕನ್ಯಾ
ಕೆರಿಯರ್‌ಗೆ ಸಂಬಂಧಿಸಿ ನಿಮಗೆ ಪೂರಕ ಬೆಳವಣಿಗೆ. ಆಪ್ತರ ಜತೆ ವ್ಯವಹರಿಸುವಾಗ ಮಾತ್ರ ಅನಪೇಕ್ಷಿತ ಬೆಳವಣಿಗೆ ಉಂಟಾದೀತು. ಮನಸ್ತಾಪ ಸಂಭವ.

ತುಲಾ
ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ. ಮೇಲಧಿಕಾರಿಗಳ ಅಸಮಾಧಾನಕ್ಕೆ ತುತ್ತಾಗುವಿರಿ. ಒತ್ತಡದ ಬದುಕು. ಆರೋಗ್ಯಕ್ಕೂ ಗಮನ ಕೊಡಿ.

ವೃಶ್ಚಿಕ
ಕೌಟುಂಬಿಕ ಹೊಣೆಗಾರಿಕೆ ಹೆಚ್ಚಳ. ಪ್ರಮುಖ ಕಾರ್ಯವೊಂದನ್ನು ಇಂದು ಪೂರೈಸಬೇಕಾದ ಒತ್ತಡ. ಇತರರ ಸಹಾಯ ನಂಬಿ ಕೂರದಿರಿ, ನೀವೇ ಮುಂದುವರಿಯಿರಿ.

ಧನು
ನಿಮ್ಮ ಉದ್ದೇಶ ಸಾಧಿಸುವಲ್ಲಿ ಇಂದು ಸಫಲವಾಗುವಿರಿ. ಅಡ್ಡಿಗಳು ಒದಗಿದರೂ ಅದನ್ನು ದಾಟುವಿರಿ. ಕೆಲವರ ಸಹಕಾರವೂ ಲಭಿಸುವುದು.

ಮಕರ
ಭಾವನೆಗಳನ್ನು ನಿಯಂತ್ರಿಸಿ. ಪ್ರಾಕ್ಟಿಕಲ್ ನಿರ್ಧಾರ ತೆಗೆದುಕೊಳ್ಳಿ. ನಿಮ್ಮ ಗುರಿ ಸಾಧನೆ ನಿಮಗೆ ಅಸಾಧ್ಯವೇನಲ್ಲ. ಆದರೆ ಸಾಧಿಸುವ ಛಲ ಇರಲಿ.

ಕುಂಭ
ಸಂಬಂಧದಲ್ಲಿ ಸಂತೋಷ ಉಳಿಸಲು ನಿಮ್ಮಿಂದ ಕೆಲವು ಹೊಂದಾಣಿಕೆ ಅಗತ್ಯ. ನಿಷ್ಠುರ ನಿಲುವು ತಾಳದಿರಿ. ಇತರರ ಮಾತು ಆಲಿಸಿರಿ.

ಮೀನ
ಆರ್ಥಿಕವಾಗಿ ನಿಮಗೆ ಅನುಕೂಲಕರವಾದ ಬೆಳವಣಿಗೆ. ಕೌಟುಂಬಿಕ ಸಾಮರಸ್ಯ. ವೃತ್ತಿಯಲ್ಲಿ  ಇತರರ ಸಹಕಾರ ಪಡೆಯುವಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!