ಹೊಸದಿಗಂತ ಡಿಜಿಟಲ್ ಡೆಸ್ಕ್:
ನಮಗೂ ಬೇರೆ ಪಕ್ಷಗಳಿಗೂ ಸಾಕಷ್ಟು ವ್ಯತ್ಯಾಸ ಇದೆ, ಆದರೆ ಮುಖ್ಯ ವ್ಯತ್ಯಾಸ ಏನು ಗೊತ್ತಾ? ಕಾರ್ಯವಿಧಾನ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜ್ಯದ 50 ಲಕ್ಷ ಬಿಜೆಪಿ ಕಾರ್ಯಕರ್ತರನ್ನು ಉದ್ದೇಶಿಸಿ ವರ್ಚ್ಯುಯಲ್ ಸಂವಾದದಲ್ಲಿ ಮಾತನಾಡಿದ್ದು, ಇತರ ಪಕ್ಷಗಳು ಅಧಿಕಾರ ಹಿಡಿಯುವುದೇ ಧ್ಯೇಯ ಎಂದುಕೊಂಡಿವೆ. ಆದರೆ ಜನರ ಪ್ರಗತಿ ಅಭಿವೃದ್ಧಿ ನಮ್ಮ ಮೂಲ ಉದ್ದೇಶ ಎಂದಿದ್ದಾರೆ.
ರಾಜ್ಯಕ್ಕೆ ಇನ್ನೆರಡು ದಿನದಲ್ಲಿ ಬರುತ್ತೇನೆ, ಈಗಾಗಲೇ ಬಿಜೆಪಿ ನಾಯಕರು ಸಾಕಷ್ಟು ಪ್ರಚಾರ ನಡೆಸುತ್ತಿದ್ದಾರೆ. ಬಿಜೆಪಿ ನಾಯಕರಿಗೆ ನೀವು ನೀಡುತ್ತಿರುವ ಪ್ರೀತಿಯಿಂದ ನಾವು ಈಗಾಗಲೇ ಗೆದ್ದಿದ್ದೇವೆ, ನಮ್ಮ ಮೇಲೆ ನೀವು ಇಟ್ಟಿರುವ ವಿಶ್ವಾಸಕ್ಕೆ ನಾವು ಸದಾ ಚಿರಋಣಿ ಎಂದಿದ್ದಾರೆ.
ಮುಂಬರುವ 25 ವರ್ಷದಲ್ಲಿ ದೇಶವನ್ನು ಬಡತನದಿಂದ ಮುಕ್ತಗೊಳಿಸಿ, ಯುವಕರ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಮಾಡುತ್ತೇವೆ, ಕರ್ನಾಟಕದ ಪ್ರಗತಿಯೂ ಡಬಲ್ ಆಗಲಿದೆ ಎಂದಿದ್ದಾರೆ.
ಡಬಲ್ ಇಂಜಿನ್ ಸರ್ಕಾರವನ್ನು ನಂಬಿ ಮತದಾನ ಮಾಡಿ, ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇವೆ, ಮುಂದೆಯೂ ಮಾಡಲು ಅವಕಾಶ ಕೊಡಿ. ಕಾಂಗ್ರೆಸ್ ಸರ್ಕಾರ ಇರುವ ಕಡೆ ಏನಾಗಿದೆ? ಅಭಿವೃದ್ಧಿ ಕುಂಠಿತವಾಗಿದೆ ಅಷ್ಟೆ ಎಂದು ಹೇಳಿದ್ದಾರೆ.
2014 ಕ್ಕೂ ಮುಂಚೆ ಒಂದು ಮನೆ ನಿರ್ಮಾಣಕ್ಕೆ 300 ದಿನ ಬೇಕಿತ್ತು, ನಮ್ಮ ಸರ್ಕಾರದ ಅವಧಿಯಲ್ಲಿ ಒಂದು ಮನೆ ನಿರ್ಮಾಣಕ್ಕೆ 100 ದಿನಗಳನ್ನು ಮಾತ್ರ ತೆಗೆದುಕೊಂಡಿದ್ದೇವೆ, ಸುಸಜ್ಜಿತ ಮನೆಗಳನ್ನು ನಿರ್ಮಿಸಿಕೊಟ್ಟಿದ್ದೇವೆ ಎಂದಿದ್ದಾರೆ. ಕಾಂಗ್ರೆಸ್ ವಾರೆಂಟಿ ಎಕ್ಸ್ಪೈರ್ ಆಗಿದೆ, ಆದರೂ ಅವರು ಸುಮ್ಮನೆ ಗ್ಯಾರೆಂಟಿ ಕೊಡುತ್ತಾ ತಿರುಗಾಡುತ್ತಿದ್ದಾರೆ. ಅವರ ಸುಳ್ಳು ಆಮಿಷಗಳನ್ನು ನಂಬಬೇಡಿ ಎಂದು ಹೇಳಿದ್ದಾರೆ