ಹೊಸದಿಗಂತ ಡಿಜಿಟಲ್ ಡೆಸ್ಕ್:
ಹೃದಯಾಘಾತದಿಂದ ಮೃತಪಟ್ಟ ಖ್ಯಾತ ನೇತ್ರ ತಜ್ಞ ಡಾ. ಭುಜಂಗ ಶೆಟ್ಟಿ ಅವರ ಕಣ್ಣುಗಳಿಂದ ಇಬ್ಬರ ಬದುಕು ಬೆಳಕಾಗಿದೆ.
ಲಕ್ಷಾಂತರ ಮಂದಿಗೆ ನೇತ್ರದಾನದ ಬಗೆಗಿನ ಅರಿವು ಮೂಡಿಸಿ, ಪ್ರೇರೇಪಣೆ ನೀಡಿದ್ದ ಡಾ. ಭುಜಂಗ ಶೆಟ್ಟಿ ಅವರಿಂದಲೇ ಇದೀಗ ನೇತ್ರದಾನವಾಗಿದೆ. ಬದುಕಿದ್ದಾಗ ಲಕ್ಷಾಂತರ ಕಣ್ಣುಗಳನ್ನು ಉಳಿಸಿದ್ದ ವೈದ್ಯರ ಕಣ್ಣುಗಳು ಇದೀಗ ಇಬ್ಬರ ಬದುಕಿಗೆ ಬೆಳಕಾಗಿವೆ. ಡಾ. ರಾಜ್ಕುಮಾರ್ ಕಣ್ಣಿನ ಬ್ಯಾಂಕ್ಗೆ ನೇತ್ರದಾನ ಮಾಡಲಾಗಿದೆ.