ದಿಗಂತ ವರದಿ ಅಂಕೋಲಾ:
ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ರಸ್ತೆ ಪಕ್ಕದ ಕಂಪೌಂಡಿಗೆ ಗುದ್ದಿ ಕರಾವಳಿ ಕಾವಲು ಪಡೆ ಕಛೇರಿ ಆವರಣಕ್ಕೆ ನುಗ್ಗಿದ ಘಟನೆ ಅಂಕೋಲಾ ತಾಲೂಕಿನ ಬೆಲೇಕೇರಿಯಲ್ಲಿ ಸಂಭವಿಸಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ರೀತಿಯ ಅಪಾಯ ಸಂಭವಿಸಿಲ್ಲ.
ಮುದಗಾ ಮೂಲದ ವ್ಯಕ್ತಿಗೆ ಸಂಬಂಧಿಸಿದ ಕಾರು ಬೆಲೇಕೇರಿ ಕಡಲ ತೀರದ ಪಕ್ಕದ ಮೈದಾನದ ಕಡೆಯಿಂದ ಬರುತ್ತಿದ್ದ ಸಂದರ್ಭದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಈ ಘಟನೆ ನಡೆದಿದ್ದು ಕಾರಿನ ಮಾಲಿಕರು ಕಂಪೌಂಡಿಗೆ ಆದ ಹಾನಿಯನ್ನು ಬರಿಸಿ ಕೊಡುವುದಾಗಿ ತಿಳಿಸಿದ್ದರಿಂದ ಘಟನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರು ದಾಖಲಾಗಿಲ್ಲ