ಹೊಸದಿಗಂತ ವರದಿ, ಚಿಕ್ಕೋಡಿ
ಚಿಕ್ಕೋಡಿ ಪಟ್ಟಣದ ನ್ಯಾಯಾಲಯ ಸಂಕೀರ್ಣ ಎದುರಿಗಿರುವ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬರಿಗೈನಿಂದ ಕಾರಿನ ಗಾಜುಗಳಿಗೆ ಗುದ್ದಿ ಪುಡಿಮಾಡಿ ಪುಂಡಾಟ ನಡೆಸಿದ್ದು, ಸಾರ್ವಜನಿಕರಲ್ಲಿ ಕೆಲಕಾಲ ಆತಂಕಕ್ಕೆ ಮೂಡಿಸಿತ್ತು.
ಕಾಡಾಪುರದ ಮಾಜಿ ತಾಪಂ ಸದಸ್ಯ ಪ್ರಕಾಶ ರಾಚನ್ನವರ ಅವರ ನಿಂತಿದ್ದ ಕಾರಿನ ಬಳಿಗೆ ಬಂದ ಕುಡುಕನೊಬ್ಬ ಪುಂಡಾಟ ನಡೆಸಿದ್ದಾನೆ. ಹಿಂಬಾಗದಿಂದ ಆಗಮಿಸಿದ ಆತ ಒಮ್ಮೆಲೆ ಕಾರಿನ ಹಿಂಬದಿ ಗಾಜುಗಳಿಗೆ ಗುದ್ದಿ ಪುಡಿ ಪುಡಿ ಮಾಡಿದ್ದಾನೆ. ಕೂಡಲೇ ಸ್ಥಳಕ್ಕಾಗಮಿಸಿದ ಚಿಕೋಡಿ ಪೋಲಿಸರು ಕುಡುಕನನ್ನು ವಶಕ್ಕೆ ಪಡೆದು ಚಿಕಿತ್ಸೆಗೆ ಸಾರ್ವಜನಿಕ ಆಸ್ಪತ್ರೆ ಕರೆದೊಯ್ದಿದ್ದಾರೆ. ಇನ್ನು ಕಾರಿನಲ್ಲಿದ್ದ ಪ್ರಕಾಶ ಅವರಿಗೂ ಘಟನೆಯಲ್ಲಿ ಸನ್ಣಪುಟ್ಟ ಗಾಯಗಳಾಗಿವೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ