ಹೊಸದಿಗಂತ ವರದಿ, ವಿಜಯಪುರ:
ಅಂತ್ಯಸಂಸ್ಕಾರದ ವೇಳೆ ಪಟಾಕಿ ಕಿಡಿ ಸಿಡಿದು ತೋಟದ ವಸತಿಯಲ್ಲಿ ಬೆಂಕಿ ಅವಘಡ ಸಂಭವಿಸಿ, 6 ಬೈಕ್ ಗಳು ಭಸ್ಮಗೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಜಯನಗೌಡ ಪಾಟೀಲ ಎಂಬುವರ ವಸತಿಯಲ್ಲಿ ಬೆಂಕಿ ಅವಘಡ ಘಟನೆ ಸಂಭವಿಸಿದ್ದು, 6 ಬೈಕ್, ಗುಡಿಸಲಿನಲ್ಲಿದ್ದ ಹತ್ತು ಚೀಲ ತೊಗರಿ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ.
ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.