ಅಂತ್ಯಸಂಸ್ಕಾರದ ವೇಳೆ ಪಟಾಕಿ ಕಿಡಿ ಸಿಡಿದು 6 ಬೈಕ್ ಭಸ್ಮ

ಹೊಸದಿಗಂತ ವರದಿ, ವಿಜಯಪುರ:

ಅಂತ್ಯಸಂಸ್ಕಾರದ ವೇಳೆ ಪಟಾಕಿ ಕಿಡಿ ಸಿಡಿದು ತೋಟದ ವಸತಿಯಲ್ಲಿ ಬೆಂಕಿ ಅವಘಡ ಸಂಭವಿಸಿ, 6 ಬೈಕ್ ಗಳು ಭಸ್ಮಗೊಂಡಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಸೋಮವಾರ ಸಂಜೆ ಸಂಭವಿಸಿದೆ.

ಜಯನಗೌಡ ಪಾಟೀಲ ಎಂಬುವರ ವಸತಿಯಲ್ಲಿ ಬೆಂಕಿ ಅವಘಡ ಘಟನೆ ಸಂಭವಿಸಿದ್ದು, 6 ಬೈಕ್, ಗುಡಿಸಲಿನಲ್ಲಿದ್ದ ಹತ್ತು ಚೀಲ ತೊಗರಿ ಸೇರಿದಂತೆ ಹಲವು ವಸ್ತುಗಳು ಹಾನಿಯಾಗಿವೆ.

ಇಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!