ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತದ 75ನೇ ಸ್ವಾತಂತ್ರೋತ್ಸವ ದೇಶದಾದ್ಯಂತ ಕಳೆಗಟ್ಟಿದ್ದು, ಪ್ರಧಾನಿ ಕರೆಗೆ ಓಗೊಟ್ಟಿರುವ ದೇಶದ ಜನತೆ ತಮ್ಮ ಸಾಮಾಜಿಕ ಜಾಲತಾಣಗಳ ಪ್ರೊಫೈಲ್ ಚಿತ್ರದಲ್ಲಿ ತಿರಂಗ ಮೆರೆಸುತ್ತಿದ್ದಾರೆ.
ಈ ನಡುವೆ ಕಾಸರಗೋಡು ಜಿಲ್ಲೆಯ ಎಡನೀರು ಶ್ರೀ ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮಿಗಳ ಭಾವಚಿತ್ರವನ್ನು ಭಾರತದ ರಾಷ್ಟ್ರಧ್ವಜವಾಗಿ ಬದಲಾಯಿಸಿದ್ದು, ಈ ಬೆಳವಣಿಗೆ ಭಕ್ತಾದಿಗಳ ಸಹಿತ ಎಲ್ಲೆಡೆ ಇನ್ನಷ್ಟು ಸಂತಸಕ್ಕೆ ಕಾರಣವಾಗಿದೆ.