ನೀತಿ ಸಂಹಿತೆ ಜಾರಿ: ಸರ್ಕಾರಿ ಕಾರಿಗೆ ಪೂಜೆ ಸಲ್ಲಿಸಿ ಬೀಳ್ಕೊಟ್ಟ ಸಚಿವ ನಾರಾಯಣಗೌಡ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚುನಾವಣಾ ಹಿನ್ನೆಲೆ ನೀತಿ ಸಂಹಿತೆ ಜಾರಿಯಾದ ಬೆನ್ನಲ್ಲೇ, ಸಚಿವ ನಾರಾಯಣಗೌಡ (Narayana Gowda)ಸರ್ಕಾರಿ ವಾಹನವನ್ನು ಭಾವನಾತ್ಮಕವಾಗಿ ಬೀಳ್ಕೊಟ್ಟರು.

ಸಚಿವ ನಾರಾಯಣಗೌಡ ಅವರು ತಮಗೆ ನೀಡಿದ್ದ ಕಾರಿಗೆ ಕೆ.ಆರ್.ಪೇಟೆ ತಮ್ಮ ನಿವಾಸದಲ್ಲಿ ಪೂಜೆ ಸಲ್ಲಿಸಿದರು. ಈ ವಿಶೇಷ ಪೂಜೆಯಲ್ಲಿ ಕರ್ಪೂರ ಬೆಳಗಿ ಈಡುಗಾಯಿ ಹೊಡೆದರು. ಪೂಜೆ ಬಳಿಕ ಸರ್ಕಾರಿ ವಾಹನ ಹಿಂದಿರುಗಿಸಿದರು.

ಕೇಂದ್ರ ಚುನಾವಣಾ ಆಯೋಗದ ಸುದ್ದಿಗೋಷ್ಠಿ ಬೆನ್ನಲ್ಲೇ ಮುಖ್ಯಮಂತ್ರಿ ನಿವಾಸದಲ್ಲಿದ್ದ ಎರಡು ಸರ್ಕಾರಿ ವಾಹನಗಳು ಅಲ್ಲಿಂದ ನಿರ್ಗಮಿಸಿದವು.
ಮೈಸೂರಿನ ಕಾರ್ಯಕ್ರಮವೊಂದಕ್ಕೆ ಸಿದ್ದರಾಮಯ್ಯ ಸರ್ಕಾರಿ ಕಾರಲ್ಲಿ ತೆರಳಿದ್ದರು. ಕಾರ್ಯಕ್ರಮ ಮುಗಿಯೋದ್ರೊಳಗೆ ನೀತಿ ಸಂಹಿತೆ ಜಾರಿಯಾಗಿತ್ತು. ಹೀಗಾಗಿ ಸಿದ್ದರಾಮಯ್ಯ ಹೊರಡುವಾಗ ಸರ್ಕಾರಿ ಕಾರು ಬದಲು ಖಾಸಗಿ ಕಾರು ಹತ್ತಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!