ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆಯ ನಂತರ ಸಿಬ್ಬಂದಿಗೆ ಹೆಚ್ಚುವರಿ ಭತ್ಯೆ, ಫೋಟೋಶೂಟ್‌

ಹೊಸದಿಗಂತ ವರದಿ, ಕಲಬುರಗಿ
ಪಿಎಸ್ಐ ನೇಮಕಾತಿ ಪ್ರಕರಣಕಕೆ ಸಂಬಂಧಿಸಿದಂತೆ ಮತ್ತೊಂದು ವಿಚಾರ ಹೊರಬಿದ್ದಿದೆ. ಪರೀಕ್ಷಾ ಅಕ್ರಮ ನಡೆಸಿದ ನಂತರ ಕಲಬುರಗಿಯ ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಸಿಬ್ಬಂದಿ ಗ್ರೂಪ್‌ ಫೋಟೋಶೋಟ್‌ ಮಾಡಿಸಿದ್ದು ಬೆಳಕಿಗೆ ಬಂದಿದೆ.
ಪಿಎಸ್ಐ ಪರೀಕ್ಷೆ ಬಳಿಕ ಎಲ್ಲ ಸಿಬ್ಬಂದಿಗೆ 4 ಸಾವಿರ ಹೆಚ್ಚಿನ ಭತ್ಯೆಯನ್ನು ಶಾಲೆಯ ಒಡತಿ ದಿವ್ಯಾ ಹಾಗರಗಿ ನೀಡಿದ್ದರು. ಆ ಭತ್ಯೆ ನೀಡುವ ಸಂದರ್ಭದಲ್ಲಿ ಸ್ಮರಣಾರ್ಥ ದಿನವೆಂದು ಎಲ್ಲರಿಗೂ ಒಟ್ಟಿಗೆ ಸೇರಿಕೊಂಡು ಪೋಟೋ ಶೂಟ್ ಮಾಡಿಕೊಂಡಿದ್ದಾರೆ.
ಪೋಟೋದಲ್ಲಿರುವ ಕೆಲವರು ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಸಿಕ್ಕಿಬಿದ್ದಿರುವ ಪರಿಣಾಮ ಪ್ರಕರಣ ಭೇಧಿಸಲು ಈ ಪೋಟೋ ಶೂಟ್ ಸಹಾಯಕವಾಗಿದೆ. ಪೋಟೋ ಶೂಟ್,ನಲ್ಲಿ ಶಾಲಾ ಸಿಬ್ಬಂದಿ ಗಳ ಜೊತೆಗೆ ಪೊಲೀಸ್‌ ಅಧಿಕಾರಿಗಳು ಅಧಿಕಾರಿಗಳು ಸಹ ಕ್ಯಾಮೆರಾ ಗೆ ಫೋಜ್ ನೀಡಿದ್ದು ಕಾಣಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!