ಫೆ.15: ಬಡಗುಶಬರಿಮಲೆ ಖ್ಯಾತಿಯ ಉಬ್ರಂಗಳ ಶ್ರೀ ಕ್ಷೇತ್ರದಲ್ಲಿ ದೃಢಕಲಶ ಸಂಭ್ರಮ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಕಾಸರಗೋಡು ಜಿಲ್ಲೆಯ ಬಡಗುಶಬರಿಮಲೆ ಉಬ್ರಂಗಳ ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದ ಬ್ರಹ್ಮಕಲಶೋತ್ಸವವು ಇತ್ತೀಚೆಗೆ ವಿಜೃಂಭಣೆಯಿಂದ ಜರುಗಿದ್ದು, ಫೆ.15ರಂದು ದೃಢಕಲಶ ನಡೆಯಲಿದೆ.

ಶ್ರೀ ಕ್ಷೇತ್ರದ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶತಂತ್ರಿಗಳ ಮುಂದಾಳುತ್ವದಲ್ಲಿ ತಾಂತ್ರಿಕ ಕಾರ್ಯಗಳು ನಡೆಯಲಿದೆ. ಫೆ.16ರಂದು ಶನಿವಾರ ಶಿವರಾತ್ರಿ ಮಹೋತ್ಸವ, ಬಲಿವಾಡು ಕೂಟ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!