ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟಿ ಊರ್ವಶಿ ರೌಟೇಲಾ ಹಾಗೂ ಕ್ರಿಕೆಟರ್ ರಿಷಭ್ ಪಂತ್ ನಡುವೆ ಬ್ರೇಕಪ್ ಆಗಿದೆ. ಅದಾಗ್ಯೂ ಇಬ್ಬರೂ ಸ್ನೇಹದಿಂದಿದ್ದಾರೆ. ಭೀಕರ ಅಪಘಾತದ ನಂತರ ಪಂತ್ರನ್ನು ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದೀಗ ಊರ್ವಶಿ ಮುಂಬೈ ತಲುಪಿದ್ದು, ಆಸ್ಪತ್ರೆಯ ಫೋಟೊವೊಂದನ್ನು ಅಪ್ಲೋಡ್ ಮಾಡಿದ್ದಾರೆ.
ಊರ್ವಶಿ ಹಾಗೂ ಪಂತ್ ನಡುವೆ ಸಾಕಷ್ಟು ಮನಸ್ತಾಪ ಎದುರಾಗಿತ್ತು. ಸಂದರ್ಶನವೊಂದರಲ್ಲಿ ನನ್ನ ನೋಡೋದಕ್ಕೆ ಪಂತ್ ಗಂಟೆಗಟ್ಟಲೆ ಕಾದಿದ್ದರು ಎಂದು ಊರ್ವಶಿ ಹೇಳಿದ್ದರು. ಇದಕ್ಕೆ ಪಂತ್ ಖಡಕ್ ಉತ್ತರ ನೀಡಿದ್ದರು. ಇದಾದ ನಂತರದಿಂದ ಈ ಜೋಡಿ ಎಲ್ಲಿಯೂ ಒಟ್ಟಿಗೆ ಕಾಣಿಸಿರಲಿಲ್ಲ.
ಊರ್ವಶಿ ತಾಯಿ ಕೂಡ, ಬೇಗ ಹುಷಾರಾಗಿ ಪಂತ್ ಎಂದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದರು. ಪಂತ್ರ ಮೇಲೆ ನಿಜವಾದ ಕಾಳಜಿ ಇದ್ದಿದ್ದರೆ ಆಸ್ಪತ್ರೆಗೆ ಹೋಗುವ ಸ್ಟೋರಿಯನ್ನು ಇನ್ಸ್ಟಾಗ್ರಾಂನಲ್ಲಿ ಯಾಕೆ ಪೋಸ್ಟ್ ಮಾಡಬೇಕು? ಪ್ರಚಾರಕ್ಕಾಗಿ ಊರ್ವಶಿ ಹೀಗೆಲ್ಲಾ ಮಾಡುತ್ತಿದ್ದಾರೆ ಎಂದು ಫ್ಯಾನ್ಸ್ ಗರಂ ಆಗಿದ್ದಾರೆ.