ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಂಡ್ಯದಲ್ಲಿ ಎತ್ತಿನಗಾಡಿ ಓಟ ಸ್ಪರ್ಧೆಯಲ್ಲಿ ದುರಂತ ಸಂಭವಿಸಿದ್ದು, ಸ್ಪರ್ಧೆ ನೋಡುತ್ತಾ ನಿಂತಿದ್ದ ರೈತನ ಮೇಲೆ ಗಾಡಿ ಹರಿದು ರೈತ ಮೃತಪಟ್ಟಿದ್ದಾರೆ.
ಚಿಕ್ಕಮಂಡ್ಯ ಗ್ರಾಮದಲ್ಲಿ ನಡೆದ ಓಟದ ಸ್ಪರ್ಧೆಯಲ್ಲಿ ಬಾಲಕನಿಗೂ ಗಂಭೀರವಾದ ಗಾಯಗಳಾಗಿವೆ. ಕೀಲಾರ ಗ್ರಾಮದ ನಾಗರಾಜು ಎತ್ತಿನ ಗಾಡಿ ಸ್ಪರ್ಧೆ ನೋಡುತ್ತಾ ನಿಂತಿದ್ದರು. ಒಂದು ಬದಿಯಿಂದ ವೇಗವಾಗಿ ಬಂದ ಎತ್ತಿನ ಗಾಡಿ ನಾಗರಾಜುಗೆ ಡಿಕ್ಕಿ ಹೊಡೆಯಿತು, ಕೆಳಗೆ ಬಿದ್ದ ನಾಗರಾಜು ಮೇಲೆ ಚಕ್ರ ಹರಿದು ಅಲ್ಲೇ ಮೃತಪಟ್ಟಿದ್ದಾರೆ. ಕೆಳಗೆ ಬಿದ್ದ ಬಾಲಕ ಋತ್ವಿಕ್ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ.