ಹೊಸದಿಗಂತ ವರದಿ ಮಡಿಕೇರಿ:
ತುಂಬಿ ಹರಿಯುತ್ತಿರುವ ಆನೆಕೆರೆಗೆ ಸೋಮವಾರಪೇಟೆ ಪಟ್ಟಣದ ನಿವಾಸಿಗಳು ಬಾಗಿನ ಅರ್ಪಿಸಿದರು. ಪಟ್ಟಣದ ಧಾರ್ಮಿಕ ಹಿನ್ನೆಲೆಯುಳ್ಳ ಆನೆಕೆರೆ ಬಹಳ ವರ್ಷಗಳ ನಂತರ ತುಂಬಿ ಹರಿಯುತ್ತಿದ್ದು, ಇಲ್ಲಿನ ವಾರ್ಡ್ ನಂ.ಒಂದರ ಬಸವೇಶ್ವರ ರಸ್ತೆ ನಿವಾಸಿಗಳು ಕೆರೆಗೆ ಪೂಜೆ ಪೂಜೆ ಸಲ್ಲಿಸಿ ಬಾಗಿನ ಅರ್ಪಿಸಿದರು.
ಈ ಸಂದರ್ಭ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ, ತಪೋವನ ಕ್ಷೇತ್ರ ಮನೆಹಳ್ಳಿ ಮಠಾಧೀಶ ಶ್ರೀ. ಮಹಾಂತ ಶಿವಲಿಂಗ ಸ್ವಾಮೀಜಿ, ಪಟ್ಟಣ ಪಂಚಾಯ್ತಿ ಸದಸ್ಯರಾದ ಬಿ.ಆರ್.ಮೃತ್ಯುಂಜಯ, ಸೋಮೇಶ್, ವೀರಶೈವ ಸಮಾಜದ ಅಧ್ಯಕ್ಷ ಶಿವಕುಮಾರ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆಯ ಜಿಲ್ಲಾಧ್ಯಕ್ಷ ಮಲ್ಲೇಶ್, ಮಹಿಳಾ ಘಟಕದ ಅಧ್ಯಕ್ಷೆ ಉಷಾರಾಣಿ, ತಾಲೂಕು ಘಟಕದ ಅಧ್ಯಕ್ಷ ಜಯರಾಜ್, ಪ್ರಮುಖರಾದ ಗಿರೀಶ್, ಆನಂದ್, ಸುಮಾ, ವಿದ್ಯಾ, ನಾಗರಾಜ್, ಚಂದ್ರಕಲಾ, ದಯಾನಂದ್, ಪ್ರಕಾಶ್ ಮುಂತಾದವರು ಹಾಜರಿದ್ದರು.