ಕೊನೆಗೂ ಸಿಕ್ಕಿತು ವರುಣನ ಬಿಡುವು: 6 ದಿನಗಳ ಬಳಿಕ ಮತ್ತೆ ಅಮರನಾಥ ಯಾತ್ರೆ ಪುನರಾರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್: ಪ್ರತಿಕೂಲ ಹವಾಮಾನದ ಕಾರಣದಿಂದಾಗಿ ಕಳೆದ ಆರು ದಿನಗಳಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆಯು ಇಂದಿನಿಂದ (ಜುಲೈ 25) ಮತ್ತೆ ಪುನರಾರಂಭಗೊಂಡಿದೆ. ಹವಾಮಾನ ಪರಿಸ್ಥಿತಿ ಕೊಂಚ ಸುಧಾರಿಸುತ್ತಿದ್ದಂತೆ ಭಕ್ತರ ಕಾಯುವಿಕೆ ಕೊನೆಗೊಂಡಿದ್ದು, ಜಮ್ಮುವಿನ ಭಗವತಿ ನಗರ ಬೇಸ್ ಕ್ಯಾಂಪ್‌ನಿಂದ ಸುಮಾರು 6,000 ಯಾತ್ರಿಕರ ಹೊಸ ಬ್ಯಾಚ್ ಹಿಮಾಲಯದ ಪವಿತ್ರ ಗುಹೆಯತ್ತ ಪ್ರಯಾಣ ಬೆಳೆಸಿದೆ.‌ ಬಿಗಿ ಭದ್ರತೆಯಲ್ಲಿ ಸಾಗಿದ ಭಕ್ತರ ದಂಡು: ಪ್ರತಿಭಟನೆಗಳು ಅಥವಾ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು ಭದ್ರತಾ ಪಡೆಗಳು … Continue reading ಕೊನೆಗೂ ಸಿಕ್ಕಿತು ವರುಣನ ಬಿಡುವು: 6 ದಿನಗಳ ಬಳಿಕ ಮತ್ತೆ ಅಮರನಾಥ ಯಾತ್ರೆ ಪುನರಾರಂಭ