ಹೊಸ ದಿಗಂತ ವರದಿ, ಮೈಸೂರು:
ಒಂದೆಡೆ ಮೈಸೂರಿನ ಸಿಎಫ್ಟಿಆರ್ಐ ಎರಡು ಚಿರತೆಗಳು ಕಾಣಿಸಿಕೊಂಡು ಆತಂಕವನ್ನುoಟು ಮಾಡಿದ್ದರೆ, ಮತ್ತೊಂದೆಡೆ ಮೈಸೂರಿನ ಇಲವಾಲದಲ್ಲಿ ಜನರಿಗೆ ಭಯ, ಭೀತಿಯನ್ನುಂಟು ಮಾಡಿದ್ದ ಚಿರತೆಯೊಂದು ಅರಣ್ಯ ಇಲಾಖೆಯವರು ಇಟ್ಟಿದೆ ಬೋನಿಗೆ ಬಿದ್ದು ಸೆರೆಯಾಗಿದೆ.
ಇಲವಾಲದಲ್ಲಿ ಕಾಣಿಸಿಕೊಳ್ಳುತ್ತಿದ್ದ ಚಿರತೆ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿತ್ತು. ಬೀದಿ ನಾಯಿಗಳನ್ನು ಎತ್ತಿಕೊಂಡು ಹೋಗುತ್ತಿತ್ತು. ಇದರಿಂದ ಆತಂಕಗೊoಡಿದ್ದ ಜನರು, ಕೂಡಲೇ ಚಿರತೆಯನ್ನು ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದರು. ಈ ಹಿನ್ನಲೆಯಲ್ಲಿ ಇಲವಾಲದ ಆರ್ಎಂಪಿಯಲ್ಲಿ ಬೋನಿಡಲಾಗಿತ್ತು. ಇದೀಗ 5 ರಿಂದ 6 ವರ್ಷ ವಯಸ್ಸಿನ ಗಂಡು ಚಿರತೆ ಬೋನಿಗೆ ಬಿದ್ದಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯಾಧಿಕಾರಿಗಳು ಚಿರತೆಯನ್ನು ಅಲ್ಲಿಂದ ಸಾಗಿಸಿದರು. ಚಿರತೆಯನ್ನು ನೋಡಲು ಜನರು ಮುಗಿ ಬಿದ್ದಿದ್ದರು. ಬೋನಿಗೆ ಬಿದ್ದಿರುವುದನ್ನು ತಿಳಿದು ಸಮಾಧಾನದ ನಿಟ್ಟಿಸಿರು ಬಿಟ್ಟರು