ಗೋಕಳ್ಳರಿಗೆ ಎರಡೇಟು ಬಿದ್ದರೆ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ?: ಪ್ರತಾಪ್‌ ಸಿಂಹ ಕಿಡಿ

ಹೊಸದಿಗಂತ ವರದಿ,ಮೈಸೂರು:

ರಾಜಸ್ಥಾನದ ಉದಯಪುರದಲ್ಲಿ ನಡೆದ ಹಿಂದೂ ದರ್ಜಿಯ ಭೀಕರ ಹತ್ಯೆ ನಡೆದಿದೆ. ಭಯೋತ್ಪಾಧಕರಿಗೆ ಕಾಂಗ್ರೆಸ್‌ನವರು ಕುಮ್ಮಕ್ಕು ನೀಡುತ್ತಿರುವುದೇ ಈ ರೀತಿಯ ಪೈಶಾಚಿಕ ಕೃತ್ಯ ನಡೆಯಲು ಕಾರಣವಾಗಿದೆ ಎಂದು ಮೈಸೂರು-ಕೊಡಗು ಕ್ಷೇತ್ರದ ಬಿಜೆಪಿ ಸಂಸದ ಪ್ರತಾಪ್‌ಸಿಂಹ ಆರೋಪಿಸಿದರು.
ಬುಧವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾಮಾಜಿಕ ಜಾಲತಾಣದಲ್ಲಿ ನೂಪುರ ಶರ್ಮಾಪರ ಪೋಸ್ಟ್ ಹಾಕಿದ ಎಂಬ ಕಾರಣಕ್ಕೆ ಹಿಂದು ದರ್ಜಿಯೊಬ್ಬರನ್ನು ಶಿರಚ್ಛೇಧ ಮಾಡುವ ಮೂಲಕ ಪೈಶಾಚಿಕ ಕೃತ್ಯ ಎಸಗಿದ್ದಾರೆ. ಅಲ್ಲದೇ ಅದನ್ನು ವಿಡಿಯೋ ಮಾಡಿ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇದೇ ಗತಿ ಆಗುತ್ತದೆ ಎಂದು ಧಮ್ಕಿ ಹಾಕಿದ್ದಾರೆ. ಇದನ್ನು ನೋಡಿದರೆ ಇವರಿಗೆ ಯಾರು ರೀತಿಯ ಕುಮ್ಮಕ್ಕು ಕೊಡುತ್ತಿದ್ದಾರೆ. ಯಾರು ಬೆನ್ನ ಹಿಂದೆ ಇದ್ದಾರೆ ಎಂಬುದು ಗೊತ್ತಾಗಬೇಕಾಗಿದೆ. ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆಯೋ, ಅಲ್ಲೆಲ್ಲಾ ಭಯೋತ್ಪಾಧಕರ ಈ ರೀತಿಯ ಕೃತ್ಯಗಳನ್ನು ಎಸಗುವ ಮೂಲಕ ಅಟ್ಟಹಾಸ ಮೆರೆಯುತ್ತಿದ್ದಾರೆ. ಇದಕ್ಕೆ ಕಾರಣ, ನಾವು ಎಷ್ಟು ಹಿಂದೂಗಳನ್ನು ಕೊಂದರೂ, ಕಾಂಗ್ರೆಸ್ ಸರ್ಕಾರ, ಕಾಂಗ್ರೆಸ್‌ನವರು ನಮಗೆ ರಕ್ಷಣೆ ನೀಡುತ್ತಾರೆ ಎಂಬುದು ಭಯೋತ್ಪಾಧಕರ ನಂಬಿಕೆಯಾಗಿದೆ. ಹೀಗಾಗಿಯೇ ದುಷ್ಕೃತ್ಯಗಳನ್ನು ನಿರಂತರವಾಗಿ ಎಸುಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಭಾರತವನ್ನು ಇಬ್ಬಾಗ ಮಾಡಿದವರ ಮನಸ್ಥಿತಿಯನ್ನು ಇನ್ನೂ ದೇಶದಲ್ಲಿ ಇದೆ. ಹಾಗಾಗಿ ಮುಸ್ಲೀಮರ ಒಲೈಕೆ ಹಾಗೂ ರಕ್ಷಣೆಗೆಂದು ಕಾಂಗ್ರೆಸ್ ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ. ಇದರಿಂದಾಗಿಯೇ ಭಯೋತ್ಪಾಧಕರು, ದೇಶ ದ್ರೋಹಿಗಳನ್ನು ಬೆಳೆಯಲು ಬಿಟ್ಟಿದ್ದಾರೆ, ಚುನಾವಣೆಯ ಸಮಯದಲ್ಲಿ ಭಯೋತ್ಪಾಧಕರು ಅಟ್ಟಹಾಸ ಮೆರೆಯುವ ಮೂಲಕ ಹಿಂದುಗಳಿಗೆ ಧಮ್ಕಿ ಹಾಕುತ್ತಿದ್ದಾರೆ. ಇವರ ಮೂಲಕ ಕಾಂಗ್ರೆಸ್‌ನವರು ಹಿಂದುಗಳ ಧ್ವನಿಯನ್ನು ಅಡಗಿಸಿ, ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ದನಗಳ್ಳರಿಗೆ ಎರಡೇಟು ಬಿದ್ದರೂ ಆಕಾಶ ಭೂಮಿ ಒಂದಾಗುವ ರೀತಿ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎಂದು ಎಡಪಂಥೀಯರ ವಿರುದ್ಧ ಸಂಸದ ಪ್ರತಾಪ್ ಸಿಂಹ ತೀವ್ರವಾಗಿ ಕಿಡಿಕಾರಿದರು.
ಕರ್ನಾಟಕದಲ್ಲೂ ಕಾಂಗ್ರೆಸ್‌ಗೆ ಅಧಿಕಾರ ಕೊಟ್ಟರೆ ಇದೇ ಪರಿಸ್ಥಿತಿ ಉಂಟಾಗುತ್ತದೆ. ಇದು ಕರ್ನಾಟಕದ ಜನರಿಗೆ ಎಚ್ಚರಿಕೆ ಗಂಟೆಯಾಗಿದೆ. ರಾಜಸ್ಥಾನ ಸರ್ಕಾರದ ಮೇಲೆ ನನಗೆ ವಿಶ್ವಾಸವಿಲ್ಲ. ಹಿಂದುಗಳ ಧ್ವನಿ ಅಡಗಿಸಲು ಈ ಕೃತ್ಯ ನಡೆದಿದೆ. ಇದರ ಹಿಂದೆ ಕಾಂಗ್ರೆಸ್ ಇದೆ. ಕಾಂಗ್ರೆಸ್‌ನವರ ಮುಸ್ಲಿಂ ಓಲೈಕೆಯಿಂದ ಈ ರೀತಿ ನಡೆಯುತ್ತಿದೆ ಎಂದು ಆರೋಪಿಸಿದರು.
ಮುಸ್ಲಿಮರೆಲ್ಲಾ ಭಯೋತ್ಪಾಧಕರಲ್ಲ ಎನ್ನುತ್ತಾರೆ. ಆದರೆ ಭಯೋತ್ಪಾಧಕರೆಲ್ಲಾ ಮುಸ್ಲಿಂಮರಲ್ಲವೇ, ಒಳ್ಳೆಯ ಮುಸ್ಲಿಮರು ಇದ್ದರೆ, ಈ ಮತಾಂಧರು, ಪೈಶಾಚಿಕರ ಕೃತ್ಯಗಳನ್ನು ತಡೆಯಲು ಯಾಕೇ ಮುಂದಾಗುತ್ತಿಲ್ಲ, ಮತಾಂಧರು, ಭಯೋತ್ಪಾಧಕರನ್ನು ಯಾಕೇ ಮಟ್ಟ ಹಾಕುತ್ತಿಲ್ಲ, ಇವರ ದುಷ್ಕೃತ್ಯಗಳ ಬಗ್ಗೆ ಯಾಕೆ ಈಗ ಮಾತಾಡ್ತಿಲ್ಲ? ಹಿಂದು ದರ್ಜಿಯ ಕೊಲೆ ತಪ್ಪು ಅಂತಾ ಆರೋಪಿಗಳ ವಿರುದ್ಧ ಫತ್ವಾ ಹೊರಡಿಸಲಿ ನೋಡೋಣಾ? ಶುಕ್ರವಾರ ಪ್ರಾರ್ಥನೆಯಾದ ನಂತರ ಕಲ್ಲು ತೂರುವಂತೆ ಹೇಳುವುದು ನಿಮ್ಮ ಕೆಲಸವಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗೋಕಳ್ಳರಿಗೆ ಎರಡೇಟು ಬಿದ್ದರೆ ಬೊಬ್ಬೆ ಹಾಕುವವರು ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಟ್ವೀಟ್ ಮಾಡಿ ಮನೆಯೊಳಗೆ ಕುಳಿತರೆ ಮುಗೀತಾ ನಿಮ್ಮ ಕೆಲಸ, ಕಾಂಗ್ರೆಸ್ ನಾಯಕರು ಈಗ ಯಾವ ಬಿಲದಲ್ಲಿ ಅಡಗಿದ್ದಾರೆ? ಎಂದು ಹರಿಹಾಯ್ದರು. ಮೈಸೂರಿನ ಮಹಾರಾಜರನ್ನು ನಾಶ ಮಾಡಿದ ಟಿಪ್ಪುವಿನ ಜಯಂತಿಯನ್ನು ಆಚರಣೆ ತಂದ
ವಿಪಕ್ಷ ನಾಯಕರಾದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಈಗ ಯಾಕೇ ಮೌನವಾಗಿದ್ದಾರೆ. ಬರೀ ಬಾಯಿ ಮಾತಿನ ಖಂಡನೆ ಹೇಳಿದರೆ ಸಾಕೇ, ರಾಜಸ್ಥಾನದಲ್ಲಿರುವ ನಿಮ್ಮ ಕಾಂಗ್ರೆಸ್ ಸರ್ಕಾರಕ್ಕೆ ಬುದ್ದಿ ಹೇಳಬೇಕು, ರಾಜ್ಯದ ಜನರು ಕಾಂಗ್ರೆಸ್‌ನ್ನು ಕರ್ನಾಟಕದಿಂದಲೇ ಹೊರ ಹಾಕಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!