ಹೊಸ ದಿಗಂತ ವರದಿ,ವಿಜಯಪುರ:
ಮಾಜಿ ಮುಖ್ಯಮಂತ್ರಿ ಸಿದ್ದರಾಮಣ್ಣನಿಗೆ ತಲೆ ಇಲ್ಲ. ಗುಂಡು ಹಾಕುವ ಕೆಲಸ ಆರ್ಎಸ್ಎಸ್ ಮಾಡಲ್ಲ. ಸಿದ್ದರಾಮಯ್ಯನನ್ನು ಕೇಳಿ ಆರ್ಎಸ್ಎಸ್ ನಡೆಸಬೇಕಿಲ್ಲ. ಅದನ್ನು ನಡೆಸುವವರು ಇದ್ದಾರೆ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ಆರ್ಎಸ್ಎಸ್ ನಿಷೇಧಿಸುವ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ನಗರದಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಮರ್ಡರ್, ಸಂಸದ ಜಿಗಜಿಣಗಿ ಕುತ್ತಿಗೆ ಕೊಯ್ಯುವ ಕೆಲಸ ಸಂಘ ಪರಿವಾರದವರು ಮಾಡುತ್ತಾರಾ ? ಆರ್ಎಸ್ಎಸ್ನಿಂದ ಯಾರಿಗೂ ಏನು ಆಗಿಲ್ಲ. ಜವಾಬ್ದಾರಿ ಅರ್ಥ ಮಾಡಿಕೊಂಡು ಸಿದ್ದರಾಮಯ್ಯ ಮಾತನಾಡಬೇಕು. ಬರೀ ಆರ್ಎಸ್ಎಸ್ ಆರ್ಎಸ್ಎಸ್ ಅನ್ನೋದು ಅಲ್ಲ ಎಂದರು.
ಪಿಎಫ್ಐ ಏನು ಮಾಡಿದೆ ಅನ್ನೊದು ಗೊತ್ತಿಲ್ವಾ ? ಎಲ್ಲಾ ಮುಸ್ಲಿಂರನ್ನು ಹಿಡಿದಿದ್ರಾ ? ದೇಶದ್ರೋಹಿ ಕೆಲಸ ಮಾಡಬಾರದು. ಭಯೋತ್ಪಾದಕ ಉತ್ಪಾದನೆ ಮಾಡಿದವರು ಇವರು ಎಂದರು.
ಪಿಎಫ್ಐನಲ್ಲಿ ಇರೋರು ಅಲ್ಪಸಂಖ್ಯಾತರು. ಯಾರ ಯಾರನ್ನು ಮುಗಿಸಬೇಕು ಅನ್ನೋರು ಅದರಲ್ಲಿ ಇದ್ದಾರೆ. ಸಿದ್ದರಾಮಯ್ಯ ಆ ತರಹ ಹೇಳಿಕೆ ನೀಡಬಾರದು ಎಂದರು.
ದೇಶ ಒಡೆದು ಭಾರತ ಜೋಡೋ ಮಾಡುತ್ತಿದ್ದಾರೆ. ಅವರ ಅಜ್ಜಿಗೆ ಕೇಳಿ ಎಂದು ಭಾರತ ಜೋಡೋಗೆ ವ್ಯಂಗ್ಯವಾಡಿದರು.
ದೇಶ ಒಡೆದವರು ಕಾಂಗ್ರೆಸ್ನವರು. ಬಿಜೆಪಿಯವರು ದೇಶ ಒಡೆದಿಲ್ಲ ಎಂದರು.