ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಂಸದ ಹಾಗೂ ಕಾಂಗ್ರೆಸ್ ನಾಯಕ ಉದಿತ್ ರಾಜ್ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಕುರಿತಾಗಿ ಮಾಡಿರುವ ಟ್ವೀಟ್ ಇದೀಗ ಚರ್ಚೆಗೆ ಗ್ರಾಸವಾಗಿದೆ. ಅವರ ಟ್ವೀಟ್ ನಲ್ಲಿ ಅವರು ದ್ರೌಪದಿ ಮುರ್ಮು ಅವರ ಕುರಿತು ಅವಮಾನಕಾರಿಯಾಗಿ ಟ್ವೀಟ್ ಮಾಡಿದ್ದು ಕಾಂಗ್ರೆಸ್ ನಾಯಕ ಉದಿತ್ ರಾಜ್ ಇದೀಗ ಫಜೀತಿಗೆ ಸಿಲುಕಿದ್ದಾರೆ.
ಟ್ವೀಟೊಂದರಲ್ಲಿ ʼಯಾವುದೇ ದೇಶಕ್ಕೆ ಇಂತಹ ರಾಷ್ಟ್ರಪತಿ ಸಿಗಬಾರದುʼ ಎಂದಿರುವ ಅವರು ವಿರುದ್ಧ ಸಾಮಾಜಿಕ ಮಾಧ್ಯಮದಲ್ಲಿ ಹಲವರು ಟೀಕಿಸುತ್ತಿದ್ದಾರೆ. ಅವರ ಈ ಟ್ವೀಟ್ ವಿರುದ್ಧ ಬಿಜೆಪಿ ತೀವ್ರವಾಗಿ ಹರಿಹಾಯ್ದಿದ್ದು ಕಾಂಗ್ರೆಸ್ ಪಕ್ಷವು ಈ ಅವಮಾನವನ್ನು ಅನುಮೋದಿಸುತ್ತದೆಯೇ ಎಂದು ಕೇಳಿದೆ. ಬಿಜೆಪಿ ವಕ್ತಾರ ಶೆಹಜಾದ್ ಪೂನವಾಲ ಟ್ವೀಟ್ ಮಾಡಿ, ” ದೇಶದ ಮೊದಲ ಆದಿವಾಸಿ ಮಹಿಳಾ ರಾಷ್ಟ್ರಪತಿಯವರ ಬಗ್ಗೆ ಉದಿತ್ ರಾಜ್ ಸ್ವೀಕಾರಾರ್ಹವಲ್ಲದ ಭಾಷೆ ಬಳಸಿದ್ದಾರೆ! ಆದಿವಾಸಿ ಸಮಾಜದ ಈ ಅವಮಾನವನ್ನು ಕಾಂಗ್ರೆಸ್ ಅನುಮೋದಿಸುತ್ತದೆಯೇ?” ಎಂದು ಅವರು ಪ್ರಶ್ನಿಸಿದ್ದಾರೆ.
ಆ ಮೂಲಕ ರಾಷ್ಟ್ರಪತಿಯವರ ಬಗ್ಗೆ ಮಾತನಾಡಿದ್ದಕ್ಕಾಗಿ ತೊಂದರೆ ಸಿಲುಕಿದ್ದಾರೆ. ಆಮೂಲಕ ತೊಂದರೆಗೆ ಸಿಲುಕಿದ ಮೂರನೇ ಕಾಂಗ್ರೆಸ್ ನಾಯಕ ಎನಿಸಿಕೊಂಡಿದ್ದಾರೆ. ಈ ಹಿಂದೆ ಅಜೋಯ್ ಕುಮಾರ್ ಮತ್ತು ಅಧೀರ್ ರಂಜನ್ ಚೌಧರಿ ಕೂಡ ರಾಷ್ಟ್ರಪತಿಗಳ ವಿರುದ್ಧವಾಗಿ ಮಾತನಾಡಿ ತೊಂದರೆ ಅನುಭವಿಸಿದ್ದರು ಎನ್ನಲಾಗಿದೆ.
After Ajoy Kumar called President Draupadi Murmu as evil & then Adhir Ranjan Chaudhary used the term “Rashtrapatni” now Congress stoops to a new low! Udit Raj uses unacceptable language for the 1st woman Adivasi President!
Does the Congress endorse this insult of Adviasi samaj pic.twitter.com/W0owoqxYHu
— Shehzad Jai Hind (@Shehzad_Ind) October 6, 2022