ನಾನೂ ಸಾರ್ವಜನಿಕರಿಂದ ಹಾರ, ಶಾಲು ಹೂವಿನ ಗುಚ್ಚ ಸ್ವೀಕರಿಸುವುದಿಲ್ಲ: ಸಚಿವ ಪರಮೇಶ್ವರ್

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಸಿಎಂ ಸಿದ್ದರಾಮಯ್ಯ ಕೈಗೊಂಡ ನಿರ್ಧಾರದಂತೆ ನಾನೂ ಸನ್ಮಾನ ರೂಪದಲ್ಲಿ ಸಾರ್ವಜನಿಕರಿಂದ ಹಾರ, ಶಾಲು ಹೂವಿನ ಗುಚ್ಚ ಸ್ವೀಕರಿಸುವುದಿಲ್ಲ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಬಗ್ಗೆ ಮಾಧ್ಯಮ ಪ್ರಕಟಣೆ ಹೊರಡಿಸಿದ ಜಿ. ಪರಮೇಶ್ವರ್ ಸಾರ್ವಜನಿಕರು ನನಗೆ ಗೌರವ-ಸನ್ಮಾನದ ರೂಪದಲ್ಲಿ ಹಾಗೂ ಅಭಿಮಾನದಿಂದ ಹಾರ-ತುರಾಯಿ, ಪುಷ್ಪಗುಚ್ಛಗಳು ಮತ್ತು ಶಾಲು-ಶಲ್ಯಗಳನ್ನು ನೀಡುವುದನ್ನು ಅತ್ಯಂತ ವಿನಯಪೂರ್ವಕವಾಗಿ ಸ್ವೀಕರಿಸದೇ ಇರಲು ನಿರ್ಧರಿಸಿದ್ದೇನೆ ಎಂದರು.

ಮುಖ್ಯಮಂತ್ರಿಗಳು ಕೈಗೊಂಡಿರುವ ನಿರ್ಧಾರವನ್ನು ಅಭಿನಂಧಿಸುತ್ತಾ ನಾನೂ ಅವರನ್ನು ಅನುಸರಿಸಲು ಬಯಸಿದ್ದೇನೆ. ಕಾಣಿಕೆಗಳ ಮೂಲಕವೇ ಪ್ರೀತಿ ಮತ್ತು ಗೌರವಗಳನ್ನು ಸಲ್ಲಿಸಬೇಕೆಂದೇನಿಲ್ಲ. ನಿಮ್ಮೆಲ್ಲರ ಪ್ರೀತಿ- ಅಭಿಮಾನ ಸದಾ ನನ್ನ ಮೇಲಿರಲಿ, ಅದಕ್ಕೆ ನಾನು ಋಣಿಯಾಗಿರುವೆ ಎಂದು ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!