ಸಾಲ ಕೊಡಿಸುವುದಾಗಿ ಹೇಳಿ ತಾನೇ ಹಣ ಪಡೆದು‌ ವಂಚನೆ

ಹೊಸದಿಗಂತ ವರದಿ ವಿಜಯಪುರ:

ಹಣಕಾಸಿನ ತೊಂದರೆ ಹಿನ್ನೆಲೆ ಸಾಲ ತೆಗೆದುಕೊಳ್ಳಲು ಹೋದ ವ್ಯಕ್ತಿಯ ದಾಖಲೆ ಪಡೆದು, ಆತನಿಗೆ ಗೊತ್ತಿಲ್ಲದಂತೆ 11 ಲಕ್ಷ ರೂ. ಸಾಲ ಪಡೆದು‌ ಆರೋಪಿಯೊಬ್ಬ ವಂಚಿಸಿರುವ ಘಟನೆ ನಗರದ ಬಸವೇಶ್ವರ ವೃತ್ತದ ಬಳಿಯ ವಿಡಿಸಿಸಿ ಬ್ಯಾಂಕ್ ನಲ್ಲಿ ನಡೆದಿದೆ.

ಇಲ್ಲಿನ ಮಠಪತಿ ಗಲ್ಲಿಯ ನಿವಾಸಿ ಅರವಿಂದ ಕೃಷ್ಣ ಕಾಳಿ ಎಂಬಾತ ವಂಚನೆಗೆ ಒಳಗಾದವರು.

ಅರವಿಂದ ಕಾಳಿ ಈತನ ಹೆಸರಲ್ಲಿ ಖಾತೆ ತೆರೆದು 11 ಲಕ್ಷ ಸಾಲ ತೆಗೆದಿದ್ದು, ಬ್ಯಾಂಕ್‌ನಿಂದ ನೋಟಿಸ್‌ ಬಂದಾಗಲೇ ವಂಚನೆಯ ಅರಿವಾಗಿದೆ.

ಇನ್ನು ನಗರದ ದಿವಟಗೇರಿ ಗಲ್ಲಿಯ ನಿವಾಸಿ ಶಿವಕುಮಾರ ನಿಂಗೊಂಡ ಚಿಕ್ಕೋಡಿ ಎಂಬಾತ ಪರಿಚಯವಾಗಿದ್ದು, ಸಾಲ ಕೊಡಿಸುವುದಾಗಿ ಹೇಳಿ ಅರವಿಂದನ ಆಧಾರ್‌ ಕಾರ್ಡ್‌, ಫೋಟೊ ಹಾಗೂ ಮನೆ ಉತಾರೆ ಪಡೆದುಕೊಂಡು ಸಾಲ ಮಂಜೂರಿ ಮಾಡಿಕೊಡುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ.

ಈ ಸಂಬಂಧ ಗಾಂಧಿಚೌಕ್‌ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!