ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗೆಳೆಯರಿಬ್ಬರ ನಡುವೆ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ನಡೆದ ಜಗಳ ಚೂರಿಯಿಂದ ಇರಿದು ಕೊಲೆಗೆಯತ್ನಿಸುವಲ್ಲಿ ಪರ್ಯಾವಸಗೊಂಡ ಘಟನೆ ಶನಿವಾರ ಬಂಟ್ವಾಳಕ್ಕೆ ಸಮೀಪದ ಪಾಣೆಮಂಗಳೂರಿನಲ್ಲಿ ನಡೆದಿದೆ.
ಪಾಣೆಮಂಗಳೂರು ನೆಹರುನಗರ ನಿವಾಸಿ ಸುಲೈಮಾನ್ ಗೆ ಈತನ ಸ್ನೇಹಿತ ನಿಸಾರ್ ಎಂಬಾತ ಚೂರಿದು ಇರಿದು ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಇವರಿಬ್ಬರು ಕೂಡ ಪಾಣೆಮಂಗಳೂರಿನ ನೆಹರು ನಗರನಿವಾಸಿಯಾಗಿದ್ದು, ಸ್ನೇಹಿತರು ಕೂಡ ಆಗಿದ್ದಾರೆನ್ನಲಾಗಿದೆ.
ಇವರಿಬ್ಬರು ಯಾವುದೋ ವಿಚಾರಕ್ಕೆ ಸಂಬಂಧಿಸಿ ಇಬ್ಬರೊಳಗೆ ಮಾತಿಗೆ ಮಾತು ಬೆಳೆದು ನಿಸಾರ್ ತನ್ನಕೈಯಲ್ಲಿದ್ದ ಚೂರಿಯಿಂದ ಸುಲೈಮಾನ್ ನ ಹೊಟ್ಟೆಯ ಭಾಗಕ್ಕೆ ತಿವಿದಿದ್ದಾನೆನ್ನಲಾಗಿದೆ. ಗಾಯಗೊಂಡ ಸುಲೈಮಾನ್ ನ್ನು ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಆರೋಪಿ ನಿಸಾರ್ ತಲೆಮರೆಸಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್ ವಿವೇಕಾನಂದ ಮತ್ತವರ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿ ಆರೋಪಿಯ ಪತ್ತೆಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.