ಅಗ್ನಿಪಥದಿಂದ ಸದೃಢ ಯುವಕರು ತಯಾರು, ಇದು ದೇಶಕ್ಕೆ ಆಸ್ತಿ: ಯತ್ನಾಳ

ಹೊಸದಿಗಂತ ವರದಿ, ವಿಜಯಪುರ:

ಅಗ್ನಿಪಥದಿಂದ ಸದೃಢ ಯುವಕರು ತಯಾರಾಗುತ್ತಾರೆ. ಇದು ದೇಶಕ್ಕೆ ಒಂದು ಆಸ್ತಿಯಾಗುತ್ತದೆ ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, 4 ವರ್ಷ ಏನು ನೇಮಕಾತಿ ಇದೆ, ಅದೇ ರೀತಿ ಅರ್ಹತೆ ಆಧಾರದ ಮೇಲೆ ಮುಂದೆ ಅವರಿಗೆ ಭಾರತೀಯ ಸೈನ್ಯದಲ್ಲಿ ಕೆಲಸ ಮಾಡಲು ಅವಕಾಶವಿದೆ. 4 ವರ್ಷದಲ್ಲಿಯೇ ವಾಪಸ್ಸು ಕಳುಹಿಸುತ್ತಾರೆನ್ನುವ ಸುದ್ದಿ ಸುಳ್ಳು, ಅವರಿಗೆ ಸಾಕಷ್ಟು ಸಂಭಾವನೆ, ಮುಂದೆ ಏನಾದರು ಹುತಾತ್ಮರಾದರೆ ಕುಟುಂಬಕ್ಕೆ 1 ಕೋಟಿಯವರೆಗೆ ಪರಿಹಾರ ಇದೆ ಎಂದರು.
ಇಸ್ರೇಲ್ ಮಾದರಿಯಲ್ಲಿ ಭಾರತದಲ್ಲಿಯೂ ಸಹ ಈ ಅಗ್ನಿಪಥ ಜಾರಿಗೊಳಿಸುವುದು ಪ್ರಧಾನಿಯವರ ಕಲ್ಪನೆಯಿದೆ. ಅಗ್ನಿಪಥ ನಮ್ಮ ಯುವಕರಲ್ಲಿ ದೇಶಾಭಿಮಾನ ಮೂಡಿಸುವಂತಹದಾಗಿದ್ದು, ಇದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!