‘ಗಂಗೂಬಾಯಿ ಕಾಥಿಯಾವಾಡಿ’ ಸಿನಿಮಾಕ್ಕೆ ಸಂಕಷ್ಟ: ಕೋರ್ಟ್ ಮೊರೆ ಹೋದ ಕುಟುಂಬಸ್ಥರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾಲಿವುಡ್‌ನ ಗಂಗೂಬಾಯಿ ಕಾಥಿಯಾವಾಡಿ ಸಿನಿಮಾ ಕಾಮಾಟಿಪುರದ ಮುಖ್ಯಸ್ಥೆಯಾಗಿದ್ದ ಗಂಗೂಬಾಯಿ ಹರ್ಜಿವಂದಾಸ್ ಅವರ ಜೀವನ ಚರಿತ್ರೆ ಆಧರಿಸಿದೆ. ಸಿನಿಮಾದಲ್ಲಿ ಆಲಿಯಾ ಭಟ್ ನಿರ್ವಹಿಸಿರುವ ಪಾತ್ರ ಪ್ರದರ್ಶನ, ನಿಜ ಜೀವನಕ್ಕೆ ಹತ್ತಿರವಾಗಿಲ್ಲ. ಇಲ್ಲಿ ಚಾರಿತ್ರ್ಯ ಹರಣವಾಗಿದೆ ಎಂದು ಗಂಗೂಬಾಯಿ ಅವರ ಕುಟುಂಬಸ್ಥರು ಆರೋಪಿಸಿದ್ದಾರೆ.

ಎಸ್. ಹುಸೇನ್ ಜೈದಿ ಬರೆದಿರುವ ‘ಮಾಫಿಯಾ ಕ್ವೀನ್ಸ್ ಆಫ್ ಮುಂಬೈ’ ಆಧರಿಸಿ ಚಿತ್ರ ನಿರ್ಮಿಸಲಾಗಿದೆ. ಟ್ರೇಲರ್‌ನಲ್ಲಿ ನಟಿ ಆಲಿಯಾರನ್ನು ವೇಶ್ಯಾಗೃಹಕ್ಕೆ ಮಾರುವುದು, ಮುಂಬೈ ರೆಡ್ ಲೈಟ್ ಏರಿಯಾದಲ್ಲಿ ಆಕೆ ದೊಡ್ಡ ವ್ಯಕ್ತಿಯಾಗಿ ಮೆರೆಯುವ ಜರ್ನಿಯನ್ನು ತೋರಿಸಲಾಗಿದೆ.

ಬರ್ಲಿನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸಿನಿಮಾ ಭರ್ಜರಿ ತಯಾರಿ ನಡೆಸಿದ ಬೆನ್ನಲ್ಲೇ ಚಿತ್ರದ ಬಿಡುಗಡೆಗೆ ತಡೆ ಕೋರಿ ಕುಟುಂಬಸ್ಥರು ನೊಟೀಸ್ ಕಳುಹಿಸಿದ್ದಾರೆ. ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಹಾಗೂ ಲೇಖಕ ಹುಸೇನ್ ಜೈದಿ ವಿರುದ್ಧ ಮಾನನಷ್ಟ ಹಾಗೂ ಚಾರಿತ್ರ್ಯ ಹರಣದ ಆರೋಪ ಮಾಡಿದ್ದು, ನೊಟೀಸ್‌ನಲ್ಲಿ ನಾಯಕಿ ಆಲಿಯಾ ಭಟ್ ಹೆಸರೂ ಇದೆ.

ಕಳೆದ ವರ್ಷ ಚಿತ್ರದ ಪ್ರೊಮೊ ಹೊರಬಂದಾಗಲೇ ಗಂಗೂಬಾಯಿ ಅವರ ದತ್ತುಪುತ್ರರು ಕೋರ್ಟ್ ಮೆಟ್ಟಿಲೇರಿದ್ದರು. ಚಿತ್ರದ ಬಿಡುಗಡೆಗೆ ತಡೆಯಾಜ್ಞೆ ಕೋರಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಸಿನಿಮಾದಲ್ಲಿ ನಮ್ಮ ತಾಯಿಯನ್ನು ಲೈಂಗಿಕ ಕಾರ್ಯಕರ್ತೆ ರೀತಿ ಬಿಂಬಿಸಲಾಗಿದೆ. ಜನರು ಈ ಬಗ್ಗೆ ಒಳ್ಳೆಯ ರೀತಿಯಲ್ಲಿ ಮಾತನಾಡುತ್ತಿಲ್ಲ. ಇದು ನನಗೆ ನೋವಾಗಿದೆ ಎಂದು ದತ್ತು ಪುತ್ರ ಬಾಬುರಾವ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!