ಹೊಸದಿಗಂತ ಡಿಜಿಟಲ್ ಡೆಸ್ಕ್
ಜ್ಯೋತಿಷಿಯ ಮಾತು ನಂಬಿದ ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಜ್ಯೂಸಿನಲ್ಲಿ ವಿಷ ಬೆರೆಸಿಕೊಟ್ಟು ಆತನ ಸಾವಿಗೆ ಕಾರಣಳಾದ ಘಟನೆ ಕೇರಳದ ತಿರುವಂನಂತ ಪುರಂನಲ್ಲಿ ಬೆಳಕಿಗೆ ಬಂದಿದೆ.
ತಿರುವನಂತಪುರಂನ ಪರಸ್ಸಾಲ ಮೂಲದ 23 ವರ್ಷದ ಯುವಕನೊಬ್ಬ ನಿಗೂಢವಾಗಿ ಸಾವನ್ನಪ್ಪಿದ ಘಟನೆ ನಡೆದಿತ್ತು. ಶರೂನ್ ಎಂಬಾತ ಸಾವನ್ನಪ್ಪಿದವನಾಗಿದ್ದರೆ, ಗ್ರೀಷ್ಮಾ ಎಂಬಾಕೆ ಆತನ ಪ್ರಿಯತಮೆ. 22 ವರ್ಷದ ಗ್ರೀಷ್ಮಾ ಜೊತೆಗೆ ಶರೋನ್ ರಾಜ್ ನಮ್ಮ ವಿವಾಹ ಮಾಡಿಕೊಡಲು ಗ್ರೀಷ್ಮಾ ಮನೆಯವರಿಗೆ ಇಷ್ಟವಿರಲಿಲ್ಲ. ಆದ್ದರಿಂದ ಅವಳ ಮದುವೆಯನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಶ್ಚಯ ಮಾಡಲಾಗಿತ್ತು. ಆದರೆ ಶರೋನ್ ಅವಳನ್ನು ಬಿಡಲು ಸಿದ್ಧನಿರಲಿಲ್ಲ. ಆದ್ದರಿಂದ ಆತನ ಗೆಳತಿ ಗ್ರೀಷ್ಮಾ ಅವನಿಗೆ ಕುಡಿಯಲು ಕೊಟ್ಟ ಕಷಾಯದಲ್ಲಿ (ಆಯುರ್ವೇದದ ಮಿಶ್ರಣ) ನಿಧಾನ ವಿಷವನ್ನು ಬೆರೆಸಿದ್ದಾಗಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
10 ದಿನಗಳ ಕಾಲ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ನಂತರ ಶರೋನ್ ಅಕ್ಟೋಬರ್ 25 ರಂದು ನಿಧನರಾಗಿದ್ದರು. ಅವಳು ಅನೇಕ ರೀತಿಯಲ್ಲಿ ಅವನಿಂದ ತಪ್ಪಿಸಲು ಪ್ರಯತ್ನಿಸಿದಳು. “ತನ್ನ ವಿವಾಹಕ್ಕೆ ಅಡ್ಡಿಯಾಗಿದ್ದ ಅವನನ್ನು ಕೊಲ್ಲುವುದು ಅವಳ ಉದ್ದೇಶವಾಗಿತ್ತು ಅದಕ್ಕಾಗಿ ಅವನಿಗೆ ವಿಷ ಬೆರಸಿದ ಕಷಾಯವನ್ನು ನೀಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ಟೋಬರ್ 14 ರಂದು ಶರೋನ್ ಗ್ರೀಷ್ಮಾ ಅವರ ಮನೆಗೆ ಭೇಟಿ ನೀಡಿದ್ದ, ಈ ವೇಳೆ ಅವನ ನೋವು ನಿವಾರಿಸಲು ಕಷಾಯವನ್ನು ಕುಡಿಯುವಂತೆ ಗ್ರೀಷ್ಮಾ ಸೂಚಿಸಿದ್ದಳು. ಮಿಶ್ರಣವು ಕಹಿಯಾಗಿದ್ದರಿಂದ, ಅದರ ಜೊತೆಗೆ ಸ್ವಲ್ಪ ಮಾವಿನ ರಸವನ್ನು ಅವನಿಗೆ ಕೊಟ್ಟಳು. ಶರೋನ್ ಜೊತೆಗಿದ್ದ ಸ್ನೇಹಿತೆಯ ಹೇಳಿಕೆಯ ಪ್ರಕಾರ, ಅವರು ಮನೆಗೆ ಹಿಂದಿರುಗುವಾಗ ವಾಂತಿ ಮಾಡುತ್ತಿದ್ದ. 10 ದಿನಗಳ ಬಳಿಕ ಆತ ಮೃತಪಟ್ಟಿದ್ದ. ಈ ಸಂಬಂಧ ಗ್ರೀಷ್ಮಾರನ್ನು ಪೊಲೀಸರುಇ ತೀವ್ರವಾಗಿ ವಿಚಾರಿಸಿದಾಗ ತನ್ನ ಕೃತ್ಯವನ್ನು ಬಾಯಿ ಬಿಟ್ಟಿದ್ದಾಳೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ