ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದು ಸಿದ್ದರಾಮಯ್ಯ ಸಂಪುಟ ಪೂರ್ಣಗೊಂಡಿದೆ. ಅಂದುಕೊಂಡ ಸಾಕಷ್ಟು ಮಂದಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಸಚಿವ ಸ್ಥಾನ ಸಿಗದ ಕಾಂಗ್ರೆಸ್ನ ಹಲವಾರು ಶಾಸಕರು ಅಸಮಾಧಾನಗೊಂಡಿದ್ದಾರೆ. ಇವರನ್ನು ಸಮಾನಾಧಪಡಿಸಲು ಡಿಸಿಎಂ ಡಿಕೆಶಿ ಎಲ್ಲರಿಗೂ ಸ್ಥಾನ ಸಿಗುತ್ತದೆ, ಕಾಯಬೇಕಷ್ಟೇ ಎಂದು ಹೇಳಿದ್ದಾರೆ.
ಎಚ್ಚರಿಕೆ ರೂಪದ ಸಲಹೆಯಂತೆ ಕಾಣುತ್ತಿದ್ದು, ಹಿಂದೆ ಸಿದ್ದರಾಮಯ್ಯನವರು ಹಾಗೂ ಧರಂ ಸಿಂಗ್ ಅವರ ಅವಧಿಯಲ್ಲಿ ನನಗೂ ಮಂತ್ರಿ ಆಗೋ ಚಾನ್ಸ್ ಸಿಕ್ಕಿರಲಿಲ್ಲ. ಆಗ ನಾನು ತಾಳ್ಮೆಯಿಂದ ಇದ್ದೆ, ಹಾಗೇ ನೀವು ತಾಳ್ಮೆಯಿಂದ ಸಹಕಾರ ನೀಡಿ ಎಂದಿದ್ದಾರೆ.