ಹೊಸದಿಗಂತ ವರದಿ,ಮೈಸೂರು:
ದಸರಾ ವಿದ್ಯುತ್ ದೀಪಾಲಂಕಾರವನ್ನು ಇನ್ನೂ ಎರಡು ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ಸೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಜಯವಿಭವಸ್ವಾಮಿ ತಿಳಿಸಿದ್ದಾರೆ.
ದೀಪಾಲಂಕಾರ ಮುಂದುವರಿಕೆ ಯಿಂದ ಮೈಸೂರು ನಗರ ಝಗಮಗಿಸುವುದರೊಂದಿಗೆ ವ್ಯಾಪಾರ ವಹಿವಾಟು ಕೂಡಾ ವೃದ್ಧಿ ಗೊಂಡಿದೆ.
ದೀಪಾಲಂಕಾರ ಮುಂದುವರಿಕೆ ಗೆ ಜನಪ್ರತಿನಿಧಿಗಳು, ಸಾರ್ವಜನಿಕ ರು, ವ್ಯಾಪಾರ ಸ್ಥರು ಹಾಗೂ ಪ್ರವಾಸಿಗರಿಂದ ತೀವ್ರ ಒತ್ತಾಯ ಬಂದ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಇಂಧನ ಸಚಿವರೊಂದಿಗೆ ಸಮಾಲೋಚನೆ ನಡೆಸಿ ಮೈಸೂರು ಹೃದಯ ಭಾಗ ಹಾಗೂ ಮುಖ್ಯ ಸ್ಥಳಗಳಲ್ಲಿ ಮಾತ್ರ ದೀಪಾಲಂಕಾರ ವನ್ನು ಅ.11 ಹಾಗೂ ಅ.12 ರಂದು ಸಂಜೆ 6.30ರಿoದ ರಾತ್ರಿ 10.30ರವರೆಗೆ ಮುಂದುವರೆಸಲಾಗುವುದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ