ಕ್ಯಾಬ್​ ಡ್ರೈವರ್​ಗೆ ಹಣ ಪಾವತಿಸಲು ಮರೆತ ಗೂಗಲ್​ ಅಧಿಕಾರಿ: ಮತ್ತೇನಾಯಿತು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ದೆಹಲಿ ವಿಮಾನ ನಿಲ್ದಾಣಕ್ಕೆ ಕ್ಯಾಬ್​ನಲ್ಲಿ ಗೂಗಲ್ ಮತ್ತು ಟ್ವಿಟರ್‌ನ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪರ್ಮಿಂದರ್ ಸಿಂಗ್ ಪ್ರಯಾಣಿಸಿದ್ದಾರೆ. ಈ ವೇಳೆ ಅವರು ವಿಮಾನ ಹತ್ತುವ ಗಡಿಬಿಡಿಯಲ್ಲಿ ಕ್ಯಾಬ್​ ಚಾಲಕನಿಗೆ ಹಣ ನೀಡುವುದನ್ನು ಮರೆತಿದ್ದರು.

ಆ ಬಳಿಕ ಇದ್ದಕ್ಕಿದ್ದಂತೆ ನೆನಪಾಗಿ ಹೇಗೆ ಹಣ ಪಾವತಿಸುವುದು ಎಂದು ವಾಪಸ್​ ಡ್ರೈವರ್​ಗೆ ಫೋನ್ ಮಾಡಿ ಕೇಳಿದಾಗ, ‘ಪರ್ವಾಗಿಲ್ಲ ಸರ್. ಮತ್ತೆ ಯಾವಾಗಲಾದರೂ ಬರುತ್ತೀರಲ್ಲ’ ಎಂದಿದ್ದಾನೆ. ಈ ಘಟನೆಯನ್ನು ನೆನಪಿಸುತ್ತಾ ಕ್ಯಾಬ್​ ಚಾಲಕನ ಪ್ರಾಮಾಣಿಕತೆಯ ಕುರಿತು ಪರ್ಮಿಂದರ್ ಸಿಂಗ್ ಟ್ವಿಟರ್ ನಲ್ಲಿ ಬರೆದುಕೊಂಡಿದ್ದು, ಎಲ್ಲೆಡೆ ಕ್ಯಾಬ್​ ಚಾಲಕ ವರ್ತಿಸಿದ ರೀತಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.

 

‘ನಾನು ಕ್ಯಾಬ್​ನಲ್ಲಿ ಪ್ರಯಾಣಿಸಿದ ತಾನು ಹಣವನ್ನು ನೀಡಲು ಮರೆತುಹೋದೆ. ನಂತರ ನಾನು ಕರೆ ಮಾಡಿದಾಗ ಕ್ಯಾಬ್​ ಚಾಲಕ ಪರವಾಗಿಲ್ಲ, ಇನ್ನೊಮ್ಮೆ ನೀಡಿ ಎಂದ. ನಾನು ಭಾರತೀಯ ಪ್ರಜೆ ಅಲ್ಲ ಎಂದು ತಿಳಿದಿದ್ದರೂ ಕ್ಯಾಬ್​ ಚಾಲಕ ಈ ರೀತಿ ವರ್ತಿಸಿದ್ದುದು ಬಹಳ ಕುತೂಹಲವಾಯಿತು .ನಂತರ ಆತನ ವಿವರ ಪಡೆದು ಹಣವನ್ನು ನೀಡಲಾಯಿತು. ಆದರೆ ಇಂಥವರೂ ಈಗ ಸಿಗುತ್ತಾರೆ ಎಂದು ತಿಳಿಯುವುದೇ ಕಷ್ಟ. ಇಂದಿನ ಕಾಲದಲ್ಲಿ ಎಲ್ಲವೂ ಹಣದಿಂದಲೇ ನಡೆಯುವಾಗ ಇಷ್ಟು ಮೃದು ಮಾತಿನಲ್ಲಿ ಚಾಲಕ ವರ್ತಿಸಿದ್ದುದು ಅಚ್ಚರಿ ತರುವಂಥದ್ದು’ ಎಂದು ಅವರು ಬರೆದುಕೊಂಡಿದ್ದಾರೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!