ಹೊಸದಿಗಂತ ವರದಿ ವಿಜಯಪುರ:
ಎಂಇಎಸ್ ಪುಂಡಾಟಿಕೆ ಸರ್ಕಾರ ಹತ್ತಿಕ್ಕಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಜಿಲ್ಲೆಯ ಬಬಲೇಶ್ವರ ತಾಲೂಕಿನ ಸಂಗಾಪುರ ಎಸ್ ಎಚ್ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಹಾಜನ ಆಯೋಗದ ವರದಿಯ ಪ್ರಕಾರ ಈಗಾಗಲೇ ಸಮಸ್ಯೆ ಇತ್ಯರ್ಥ ಆಗಿದೆ. ಯಾವ ಪ್ರದೇಶ ಕರ್ನಾಟಕಕ್ಕೆ ಸೇರಬೇಕು, ಯಾವುದು ಮರಾರಾಷ್ಟ್ರಕ್ಕೆ ಸೇರಬೇಕು ಎಂದು ಇತ್ಯರ್ಥ ಆಗಿದೆ ಎಂದರು.
ಈಗ ಕ್ಯಾತೆ ತಗೆಯೋದು ರಾಜಕಾರಣಕ್ಕಾಗಿ, ಇದಕ್ಕೆಲ್ಲ ಸರ್ಕಾರ ಹತ್ತಿಕ್ಕಬೇಕು. ಸರ್ಕಾರ ಎಂಇಎಸ್ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದರು.
ಪಿಎಸ್ಐ ನೇಮಕಾತಿಯಲ್ಲಿ ಸಚಿವ ಅಶ್ವತ್ ನಾರಾಯಣ ಸಹೋದರ ಸತೀಶ ಕೈವಾಡ ಆರೋಪದ ಕುರಿತು ಪ್ರತಿಕ್ರಿಯಿಸಿ, ಇದರಲ್ಲಿ ಯಾರದೇ ಕೈವಾಡ ಇದ್ದರೂ ಅವರು ಕೂಡಲೇ ರಾಜೀನಾಮೆ ಕೊಡಬೇಕು. ನಾನು ಉಗ್ರಪ್ಪ ಅವರ ಜೊತೆ ಮಾತನಾಡಿಲ್ಲ, ಮಾತನಾಡುವೆ. ಅವರ ಬಳಿ ಏನಾದರೂ ದಾಖಲೆ ಇದ್ದರೆ ತೋರಿಸುವಂತೆ ತಿಳಿಸುವೆ ಎಂದರು