ಹೊಸದಿಗಂತ ಡಿಜಿಟಲ್ ಡೆಸ್ಕ್:
ಗುಜರಾತ್ ಸಚಿವ ಅರವಿಂದ್ ರಯಾನಿಗೆ ಕಬ್ಬಿಣದ ಸರಪಳಿಯಿಂದ ಹೊಡೆದುಕೊಳ್ಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಚಿವರಾಗಿ ಇಂತಹ ಮೂಢನಂಬಿಕೆಗಳನ್ನು ಪ್ರಚಾರ ಮಾಡುತ್ತೀರಾ? ಎಂಬಂತಹ ಟೀಕೆಗಳಿಗೆ ಪ್ರತಿಕ್ರಿಯಿಸಿದ ಸಚಿವ ಇದನ್ನು ಮೂಢನಂಬಿಕೆ ಎಂದು ನೋಡಬೇಡಿ. ನಂಬಿಕೆ, ಮೂಢನಂಬಿಕೆ ನಡುವೆ ಒಂದು ಗೆರೆ ಇದೆ ಎಂದು ಸಲಹೆ ನೀಡಿದರು.
ಗುರುವಾರ (ಮೇ 26,2022) ರಾಜ್ಕೋಟ್ನಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಸಚಿವ ಅರವಿಂದ್ ಭಾಗವಹಿಸಿದ್ದರು. ಅಲ್ಲಿನ ದೇವಿಯ ಆರಾಧನೆಯ ಅಂಗವಾಗಿ ಕಬ್ಬಿಣದ ಸರಪಳಿಯಿಂದ ತನ್ನನ್ನು ತಾನು ದಂಡಿಸಿಕೊಂಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಕರೆನ್ಸಿ ನೋಟುಗಳನ್ನು ಅವರ ಮೇಲೆ ಎಸೆಯಿತ್ತಿರುವ ವಿಡಿಯೋ ಕುರಿತು ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಈ ಎಲ್ಲಾ ಪ್ರಶ್ನೆಗಳಿಗೆ ಸಚಿವರು ಉತ್ತರಿಸಿದ್ದು, ‘ನಾನು ಬಾಲ್ಯದಿಂದಲೂ ದೇವಿಯ ಭಕ್ತ. ನಮ್ಮ ಕುಟುಂಬಸ್ಥರು ಕೂಡ ನಮ್ಮ ಊರಿನಲ್ಲಿ ಈ ಕಾರ್ಯಕ್ರಮಗಳನ್ನು ನಡೆಸುತ್ತಾರೆ. ಇದು ದೇವಿಯ ಮೇಲೆ ನನಗಿರುವ ನಂಬಿಕೆ ಎಂದು ಉತ್ತರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೊ ವೈರಲ್ ಆಗಿದ್ದು, ಪರ-ವಿರೋಧ ಚರ್ಚೆಯಾಗುತ್ತಿದೆ.
રાજ્યકક્ષાના મંત્રી અરવિંદ રૈયાણી ધુણ્યા#ArvindRaiyani@BJP4Gujarat pic.twitter.com/8GgsYJZ7rL
— narendra Ahir (@pithiyanarendra) May 27, 2022