ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂಬೈಯಿಂದ ಗುಜರಾತಿ ಮತ್ತು ರಾಜಸ್ತಾನಿ ಜನರನ್ನು ಹೊರ ಕಳುಹಿಸಿದರೆ ಮುಂಬೈ ಮತ್ತು ಥಾಣೆಯಲ್ಲಿ ಹಣವೇ ಇರಲ್ಲ ಎಂಬ ಮಹಾರಾಷ್ಟ್ರ ಗವರ್ನರ್ ಬಿಎಸ್ ಕೊಶಿಯಾರಿ ಹೇಳಿಕೆಗೆ ಎಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದ್ದು, ಇದೀಗ ರಾಜ್ಯಪಾಲರು ಕ್ಷಮೆಯಾಚಿಸಿದ್ದಾರೆ .
ಕಳೆದ ಶುಕ್ರವಾರ ಕೊಶಿಯಾರಿ ಅವರು ಮುಂಬೈಯಿಂದ ಗುಜರಾತಿ ಮತ್ತು ರಾಜಸ್ತಾನಿ ಜನರನ್ನು ಹೊರ ಕಳುಹಿಸಿದರೆ ಮುಂಬೈ ಮತ್ತು ಥಾಣೆಯಲ್ಲಿ ಹಣವೇ ಇರಲ್ಲ. ಮುಂಬೈ ದೇಶದ ಆರ್ಥಿಕ ರಾಜಧಾನಿಯಾಗಿ ಉಳಿಯಲು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದರು.
मा. राज्यपालांचे निवेदन pic.twitter.com/3pKWHYgPp8
— Governor of Maharashtra (@maha_governor) August 1, 2022
ಈ ಹೇಳಿಕೆಗೆ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಮಹಾರಾಷ್ಟ್ರರಾಜ್ಯಪಾಲರು ಇಂದು ಮರಾಠಿಯಲ್ಲಿ ಟ್ವೀಟ್ ಮಾಡಿ ಕ್ಷಮೆಯಾಚಿಸಿದ್ದಾರೆ.
ಮಹಾರಾಷ್ಟ್ರದ ಜನರು ಹೃದಯವಂತರು. ನನ್ನ ಇತ್ತೀಚಿನ ಹೇಳಿಕೆಗಳನ್ನು ಕ್ಷಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ರಾಜಭವನ ಹೊರಡಿಸಿದ ಹೇಳಿಕೆಯಲ್ಲಿ ಬಿಎಸ್ ಕೊಶಿಯರಿ ಹೇಳಿದ್ದು, ಸಮಾಜದ ಕೆಲವು ಸದಸ್ಯರ ಕೊಡುಗೆಯ ಬಗ್ಗೆ ಮಾತನಾಡುವಾಗ ಅವರು ತಪ್ಪಾಗಿ ಈ ಮಾತುಗಳನ್ನಾಡಿದ್ದಾರೆ ಎಂದು ಹೇಳಿದೆ.
ರಾಜ್ಯಪಾಲರ ಹೇಳಿಕೆಗೆ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಕೂಡ ಖಂಡನೆ ವ್ಯಕ್ತಪಡಿಸಿದ್ದರು.