ಹೊಸದಿಗಂತ ವರದಿ,ಅಂಕೋಲಾ :
ರಾಷ್ಟ್ರ ರಾಜಧಾನಿಯಾದ ದೆಹಲಿಯಲ್ಲಿ ಜ. ೨೬ರಂದು ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್ನಲ್ಲಿ ಕರ್ನಾಟಕದಿಂದ ತೆರಳಿದ್ದ ‘ನಾರಿ ಶಕ್ತಿ’ ರೂಪಕದ ಎದುರು ಕಾರವಾರ-ಅಂಕೋಲಾ ತಾಲೂಕಿನಿಂದ ತೆರೆಳಿದ ಸುಗ್ಗಿ ತಂಡ ಪ್ರದರ್ಶನಕ್ಕೆ ಸಜ್ಜಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಭಾಗದಲ್ಲಿ ಬಹುಸಂಖ್ಯಾತರಾಗಿರುವ ಬುಡಕಟ್ಟು ಜನಾಂಗದ ಹಾಲಕ್ಕಿ ಒಕ್ಕಲಿಗರ ಸುಗ್ಗಿ ಕುಣಿತವು ವೈಶಿಷ್ಠ್ಯಪೂರ್ಣವಾದುದು.
ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆಯುವ ಪರೇಡ್ನಲ್ಲಿ ಹಾಲಕ್ಕಿ ಒಕ್ಕಲಿಗರ ಸುಗ್ಗಿ ತಂಡಕ್ಕೂ ಕೂಡ ಅವಕಾಶ ಮಾಡಿಕೊಟ್ಟಿರುವುದು ಇಡೀ ಸಮಾಜಕ್ಕೆ ಹರ್ಷ ಉಂಟು ಮಾಡಿದೆ.
‘ನಾರಿ ಶಕ್ತಿ’ಯಲ್ಲಿ ತಾಲೂಕಿನವರೇ ಆದ ತುಳಸಿ ಗೌಡ ಕೂಡ ಇರುವುದು ಜಿಲ್ಲೆಯ ಹೆಮ್ಮೆಯಾಗಿದೆ.