ಹೊಸ ದಿಗಂತ ವರದಿ, ಯಲ್ಲಾಪುರ :
ತಾಲೂಕಿನ ಬೊಡ್ಕೆಸರ್ ದಲ್ಲಿ ಆಕಸ್ಮಿಕ ವಾಗಿಯೋ ಅಥವಾ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದ ಪರಿಣಾಮ ಹುಲ್ಲಿನ ಬಣವೆಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ಬೊಡ್ಕೆಸರ್ ದ ಗರಗ್ ಕಾಲೋನಿ ನಿವಾಸಿ ಲಕ್ಷ್ಮಣ ಗರಗ್ ಅವರ ಹುಲ್ಲಿನ ಬಣಿವೆ ಬೆಂಕಿ ಹೊತ್ತಿಕೊಂಡಿದ್ದು,ವಿಷಯ ತಿಳಿದ ಕೂಡಲೇ ಅಗ್ನಿ ಶಾಮಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದರೆ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.