ತಿರುಮಲದಲ್ಲಿ ಭಾರೀ ಮಳೆ: ಘಾಟ್ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮಂಡೌಸ್ ಚಂಡಮಾರುತ ಕರಾವಳಿಯನ್ನು ದಾಟಿದೆ. ಇದು ತಮಿಳುನಾಡಿನ ಮಹಾಬಲಿಪುರಂನಲ್ಲಿ ಕರಾವಳಿಯನ್ನು ದಾಟಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಈ ಚಂಡಮಾರುತದಿಂದಾಗಿ ತಮಿಳುನಾಡು ಜೊತೆಗೆ ಎಪಿಯ ರಾಯಲಸೀಮಾ ಮತ್ತು ಕರಾವಳಿ ಆಂಧ್ರ ಪ್ರದೇಶಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುತ್ತಿದೆ. ನೆಲ್ಲೂರು, ಚಿತ್ತೂರು, ತಿರುಪತಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಿಂದ ತಿರುಪತಿ ನಗರ ಜಲಾವೃತವಾಗಿದ್ದು, ನಗರದ ರಸ್ತೆಗಳು ಅಸ್ತವ್ಯಸ್ತವಾಗಿವೆ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ತಿರುಪತಿಯ ಮಾಳವಾಡಿ ಗುಂಡಕ್ಕೆ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ.

ತಿರುಪತಿ ಬೆಟ್ಟದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ ಶೇಷಾಚಲಂ ಅರಣ್ಯ ಪ್ರದೇಶದ ಮಳೆ ನೀರೆಲ್ಲ ಮಾಳವಾಡಿ ಗುಂಡಂ ಮೂಲಕ ಕಪಿಲ ತೀರ್ಥ ತಲುಪುತ್ತಿದೆ. ಇದರಿಂದಾಗಿ ಕಪಿಲತೀರ್ಥದ ಪುಷ್ಕರಿಣಿಗೆ ಭಕ್ತರಿಗೆ ಪ್ರವೇಶವಿಲ್ಲ. ಭಾರೀ ಮಳೆಗೆ ತಿರುಮಲದಲ್ಲಿ ಮರಗಳು ಉರುಳಿವೆ. ಭಾರೀ ಮಳೆಯಿಂದಾಗಿ ತಿರುಮಲ ಘಾಟ್ ರಸ್ತೆಗಳಲ್ಲಿ ದ್ವಿಚಕ್ರ ಹಾಗೂ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಪಾಪವಿನಾಶನಂ ಮತ್ತು ಶಿಲಾತೋರಣಂ ರಸ್ತೆಗಳನ್ನು ಮುಚ್ಚಲಾಗಿದೆ.

ಮಂಡೌಸ್ ಚಂಡಮಾರುತದಿಂದಾಗಿ ಶುಕ್ರವಾರದಿಂದ ತಿರುಮಲದಲ್ಲಿ ಮಳೆಯಾಗುತ್ತಿದೆ. ಶನಿವಾರ ಸುರಿದ ಮಳೆಯಿಂದಾಗಿ ಶ್ರೀವಾರಿಯ ಮೆಟ್ಟಿಲುಗಳ ಮೂಲಕ ಪ್ರವಾಹದ ರೀತಿ ನೀರು ಹರಿಯುತ್ತಿರುವುದರಿಂದ ಭಕ್ತರು ಪರದಾಡುತ್ತಿದ್ದಾರೆ. ಇದರೊಂದಿಗೆ ವಿಪರೀತ ಚಳಿಗಾಳಿಯಿಂದಾಗಿ ತಿರುಮಲ ಬೆಟ್ಟ ಏರುವ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!