ದಿಗಂತ ವರದಿ ವಿಜಯಪುರ:
ನಗರದ ಉಪ್ಪಲಿ ಬುರುಜ್ ಬಳಿ ಹುಬ್ಬಳ್ಳಿಯ ಲೋಕಹಿತ ಟ್ರಸ್ಟ್ ಸಂಚಾಲಿತ ವತಿಯಿಂದ ಸೋಮವಾರ ಡಾ. ಹೆಡಗೇವಾರ ಆರೋಗ್ಯ ಕೇಂದ್ರದ ಲೋಕಾರ್ಪಣೆಯನ್ನು ಹಿರಿಯ ಶಸ್ತ್ರ ಚಿಕಿತ್ಸಕ ಡಾ. ಬಿ.ಸಿ. ಉಪ್ಪಿನ ನೆರವೇರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹುಬ್ಬಳ್ಳಿಯ ಲೋಕಹಿತ ಟ್ರಸ್ಟ್ ಚೇರ್ಮನ್ ಅರವಿಂದರಾವ ದೇಶಪಾಂಡೆ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತ ವ್ಯವಸ್ಥಾ ಪ್ರಮುಖರಾದ ಮಂಗೇಶ ಭೇಂಡೆ, ಡಾ.ಸತೀಶ ಜಿಗಜಿನ್ನಿ, ಬಸವರಾಜ ಆಲೂರ, ಡಾ.ಶೈಲೇಶ ಕನ್ನೂರ, ಬೃಹತ್ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, ಸಂಸದ ರಮೇಶ ಜಿಗಜಿಣಗಿ, ಶ್ರೀಕಾಂತ ಕುಲಕರ್ಣಿ, ಬೀಜ ಮತ್ತು ಸಾವಯವ ಪ್ರಮಾಣ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಮಾಜಿ ಸಚಿವ ಅಪ್ಪಾಸಾಹೆಬ್ಬ ಪಟ್ಟಣಶೆಟ್ಟಿ, ಪ್ರಕಾಶ ಅಕ್ಕಲಕೋಟ, ಸುರೇಶ ಬಿರಾದಾರ, ಉಮೇಶ ಕಾರಜೋಳ, ಅರುಣ ಶಹಾಪುರ, ವಿಜಯ ಜೋಶಿ ಇದ್ದರು.