ಹೊಸದಿಗಂತ ಡಿಜಿಟಲ್ ಡೆಸ್ಕ್ :
ಶಬರಿಮಲೆ ಸ್ವಾಮಿ ಪ್ರಸಾದವೆಂದರೆ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಎಲ್ಲರೂ ಒಮ್ಮೆ ಅಂಗೈ ಚಾಚಿ ಪ್ರಸಾದವನ್ನೇ ಊಟವೆನ್ನುವಂತೆ ಚಪ್ಪರಿಸುತ್ತಾರೆ. ಶಬರಿಮಲೆಯ ಪ್ರಸಿದ್ಧ ಪ್ರಸಾದದ ಹೆಸರು ಅರಾವಣಂ ಪಾಯಸಂ. ಬನ್ನಿ ಈ ಪಾಯಸ ಮಾಡಲು ಯಾವೆಲ್ಲಾ ಸಾಮಗ್ರಿಗಳು ಬೇಕು ಮತ್ತು ಮಾಡುವ ವಿಧಾನ ಹೇಗಿರತ್ತೆ ತಿಳಿಯೋಣ.
ಬೇಕಾಗುವ ಸಾಮಗ್ರಿಗಳು :
ಮಟ್ಟಾ ರೈಸ್ (ಕೆಂಪು ಕುಚಲಕ್ಕಿ)
ತುಪ್ಪ
ನೀರು
ತೆಂಗಿನಕಾಯಿ ತುಂಡು
ಶುಂಠಿ ಪುಡಿ (ಚುಕ್ಕು)
ಏಲಕ್ಕಿ
ಮಾಡುವ ವಿಧಾನ :
ಒಂದು ಪಾತ್ರೆಯನ್ನು ಬಿಸಿ ಮಾಡಿ ತುಪ್ಪ ಸೇರಿಸಿ. ಅದಕ್ಕೆ ಕತ್ತರಿಸಿದ ತೆಂಗಿನಕಾಯಿ ತುಂಡು ಹಾಕಿ ಅದರ ಬಣ್ಣ ಸ್ವಲ್ಪ ಕಂದು ಬಣ್ಣ ಬರುವವರೆಗೆ ಬಿಸಿ ಮಾಡಿ. ನಂತರ ತೆಂಗಿನ ಕಾಯಿ ತೆಗೆದಿಡಿ, ಈಗ ಅದೇ ತುಪ್ಪಕ್ಕೆ ಮಟ್ಟಾ ರೈಸ್ ಹಾಕಿ 5 ನಿಮಿಷ ಫ್ರೈ ಮಾಡಿ. ನಂತರ ತುರಿದ ಬೆಲ್ಲ ಹಾಕಿ, ಬೆಲ್ಲ ಕರಗುವವರೆಗೆ ಬಿಡಿ.
ನಂತರ ಜಜ್ಜಿದ ಏಲಕ್ಕಿ ಹಾಕಿ.
ಅಕ್ಕಿಯಿಂದ ತುಪ್ಪ ಬಿಟ್ಟು ಮೇಲ್ಭಾಗದಲ್ಲಿ ತೇಲುವವರೆಗೆ ಬೇಯಿಸಿ. ಮಿಶ್ರಣ ಗಟ್ಟಿಯಾದಾಗ ಗ್ಯಾಸ್ ಆಫ್ ಮಾಡಿ. ನಂತರ ಫ್ರೈ ಮಾಡಿಟ್ಟ ತೆಂಗಿನಕಾಯಿ ಪೀಸ್ ಸೇರಿಸಿ, ನಂತರ ಚುಕ್ಕು ಪುಡಿ ಹಾಕಿ ಮಿಶ್ರ ಮಾಡಿ.