ʻಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತೇನೆ: ಸಿನಿಮಾಗಳಿಗಿಂತ ರಾಜಕೀಯದಲ್ಲಿ ಹೆಚ್ಚು ಆಸಕ್ತಿʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಚಿತ್ರರಂಗದವರು ರಾಜಕೀಯಕ್ಕೆ ಎಂಟ್ರಿ ಕೊಡೋದು ಹೊಸದೇನಲ್ಲ, ಮತ್ತೊಬ್ಬ ನಾಯಕಿ ಈ ಪಟ್ಟಿಗೆ ಸೇರಿಕೊಳ್ಳಲಿದ್ದಾರೆ. ಸಿಂಹಮಂಟೆ ಚಿನ್ನೊಡೆ ವೇಟಕೊಚ್ಚಾಡೆ ಎಂಬ ಬಾಲಯ್ಯನ ಹಾಡಿನಲ್ಲಿ ನೃತ್ಯ ಮಾಡಿರುವ ನಮಿತಾ ತೆಲುಗು, ತಮಿಳಿನಲ್ಲಿ ಸಾಕಷ್ಟು ಸಿನಿಮಾ ಮಾಡಿದ್ದಾರೆ. ಕೆಲವು ವರ್ಷಗಳ ಹಿಂದೆ ವಿವಾಹವಾದ ಅವರು ದಾಂಪತ್ಯ ಜೀವನದಲ್ಲಿ ಸಂತೋಷದಿಂದಿದ್ದಾರೆ. ಇತ್ತೀಚೆಗೆ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದ ನಮಿತಾ ತಿರುಮಲ ದೇವರ ದರ್ಶನಕ್ಕೆ ಬಂದಿದ್ದರು.

ಶ್ರೀಗಳ ದರ್ಶನ ಪಡೆದ ನಮಿತಾ ಮಾಧ್ಯಮದವರೊಂದಿಗೆ ಮಾತನಾಡಿ, ನನಗೆ ಇಬ್ಬರು ಮಕ್ಕಳಿದ್ದಾರೆ ತುಂಬಾ ಚೆನಾಗಿದ್ದಾರೆ. ನಮ್ಮ ಕುಟುಂಬ ಬಹಳ ಸಂತೋಷದಿಂದ ಇದ್ದೇವೆ. ಅದಕ್ಕಾಗಿಯೇ ನಾನು, ನನ್ನ ಪತಿ ಮತ್ತು ಕುಟುಂಬ ಸದಸ್ಯರು ಒಟ್ಟಾಗಿ ವೆಂತಟೇಶ್ವರ ಸ್ವಾಮಿಗೆ ದರ್ಶನ ಪಡೆಯಲು ಬಂದೆವು ಎಂದರು. ಇದೇ ಸಮಯದಲ್ಲಿ ನಾನು ಸಿನಿಮಾ ಮಾಡುತ್ತೇನೋ ಇಲ್ಲವೋ ಎಂದು ಹೇಳಲಾರೆ. ಆದರೆ ಸಿನಿಮಾಕ್ಕಿಂತ ರಾಜಕೀಯದಲ್ಲಿ ಹೆಚ್ಚು ಆಸಕ್ತಿ. ನಾನು ಶೀಘ್ರದಲ್ಲೇ ರಾಜಕೀಯಕ್ಕೆ ಬರುತ್ತೇನೆ ಎಂದರು.

ನಮಿತಾ ಹೇಳಿಕೆ ತಮಿಳು ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ನಮಿತಾ ಯಾವ ಪಕ್ಷಕ್ಕೆ ಸೇರುತ್ತಾರೆ ಎಂದು ತಮಿಳು ರಾಜಕೀಯ ವಲಯ ಕಾತುರದಿಂದ ಕಾಯುತ್ತಿವೆ. ಮುಂದಿನ ಚುನಾವಣೆಯಲ್ಲಿ ನಮಿತಾ ಸ್ಪರ್ಧಿಸುವ ಸಾಧ್ಯತೆ ಇದೆ ಎನ್ನುತ್ತಿವೆ ತಮಿಳು ಮಾಧ್ಯಮಗಳು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!