ಮಹಾಶಿವರಾತ್ರಿ ಹಿನ್ನೆಲೆ, ಪೂಜೆಗೆ ಬಂದ ಹಿಂದು ಕಾರ್ಯಕರ್ತರು ಅರೆಸ್ಟ್: ಏನಿದು ಪ್ರಕರಣ?

ಹೊಸದಿಗಂತ ವರದಿ ಕಲಬುರಗಿ: ಕಲಬುರಗಿ ನಗರದ ಐತಿಹಾಸಿಕ ಕೋಟೆಯಲ್ಲಿರುವ ಸ್ವಯಂಭೋ ಸೋಮೇಶ್ವರ ದೇವಸ್ಥಾನದಲ್ಲಿ ಮಹಾಶಿವರಾತ್ರಿಯ ಅಂಗವಾಗಿ ಪೂಜೆ ಸಲ್ಲಿಸಲು ಬಂದಿದ್ದ ನೂರಾರು ಹಿಂದು ಕಾರ್ಯಕರ್ತರನ್ನು ಬಂಧಿಸಿದ ಘಟನೆ ಭಾನುವಾರ ನಡೆದಿದೆ. ದೇಶಾದ್ಯಂತ ಶಿವರಾತ್ರಿಯ ಮಹಾ ಪರ್ವದ ಹಿನ್ನೆಲೆಯಲ್ಲಿ ಕೋಟೆಯೊಳಗಿನ ಸ್ವಯಂಭೋ ಸೋಮೇಶ್ವರ ದೇವಸ್ಥಾನದಲ್ಲಿ ಭಕ್ತಿಯಿಂದ ಪೂಜೆ ಸಲ್ಲಿಸಲು ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಕಾರ್ಯಕರ್ತರು ನಿರ್ಧರಿಸಿದ್ದರು. ಆದರೆ,ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಿದ ಪೊಲೀಸ್ ಇಲಾಖೆ, ಭಾನುವಾರ ಬೆಳಿಗ್ಗೆ ಕೋಟೆಯ ಸುತ್ತಮುತ್ತ ನೂರಾರು ಪೊಲೀಸರನ್ನು ನಿಯೋಜಿಸಿ, … Continue reading ಮಹಾಶಿವರಾತ್ರಿ ಹಿನ್ನೆಲೆ, ಪೂಜೆಗೆ ಬಂದ ಹಿಂದು ಕಾರ್ಯಕರ್ತರು ಅರೆಸ್ಟ್: ಏನಿದು ಪ್ರಕರಣ?