ಆಕ್ರಮಣ ಮಟ್ಟ ಹಾಕಲು ಹಿಂದು ಸಮಾಜ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು: ಜಗದೀಶ್ ಕಾರಂತ್ ಕರೆ

ಹೊಸದಿಗಂತ ವರದಿ, ಶಿವಮೊಗ್ಗ:

ಭಾರತವನ್ನು 2047 ಕ್ಕೆ ಇಸ್ಲಾಮಿಕ್ ರಾಷ್ಟ್ರ ಮಾಡುವ ಮತಾಂಧರ ಬಗ್ಗೆ ತಿಳಿದೂ ಹಿಂದು ಸಮಾಜ ಹಗಲು ಕನಸು ಕಾಣುತ್ತಾ ಕೂರುವುದು ಸಲ್ಲ ಎಂದು ಹಿಂದೂ ಜಾಗರಣದ ಕ್ಷೇತ್ರಿಯ  ಸಂಘಟನಾ ಕಾರ್ಯದರ್ಶಿ ಜಗದೀಶ್ ಕಾರಂತ್ ಎಚ್ಚರಿಕೆ ನೀಡಿದ್ದಾರೆ.
ಹಿಂದು ಜಾಗರಣ ವೇದಿಕೆ ಕರ್ನಾಟಕ ದಕ್ಷಿಣ ಪ್ರಾಂತ ವತಿಯಿಂದ ನಗರದ ಎನ್‌ಇಎಸ್ ಮೈದಾನದಲ್ಲಿ ಭಾನುವಾರ ಆಯೋಜಿಸಿದ್ದ  3ನೇ ತ್ರೈವಾರ್ಷಿಕ ಪ್ರಾಂತ ಸಮ್ಮೇಳನದಲ್ಲಿ ಅವರು ಮಾತನಾಡಿದರು.
‘ಭಾರತ ‘ಭಾರತವಾಗಿ ಉಳಿಯಬಾರದು. ನಾಶ ಮಾಡಬೇಕು ಎಂದು ಅನ್ಯಾನ್ಯ ನೆಲೆಯಲ್ಲಿ ನಿರಂತರ ಸಾಮಾಜಿಕ ಯುದ್ಧ ನಡೆಸುತ್ತಿರುವ ಶಕ್ತಿ ಬಗ್ಗೆ ಗೊತ್ತಿದೆ. ಇಂತಹ ಆಕ್ರಮಣ ಹೇಗೆ ಮಟ್ಟ ಹಾಕಬೇಕು ಎಂಬ ಬಗ್ಗೆ ಹಿಂದು ಸಮಾಜ ದಿಟ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!