ಐತಿಹಾಸಿಕ ಕ್ಷಣ: ಅಂತರ ಗಡಿ ವಿವಾದ ಇತ್ಯರ್ಥ ಒಪ್ಪಂದಕ್ಕೆ ಸಹಿ ಹಾಕಿದ ಅಸ್ಸಾಂ, ಅರುಣಾಚಲ ಪ್ರದೇಶ!

ಹೊಸದಿಗಂತ ಡಿಜಿಟಲ್‌ ಡೆಸ್ಕ್ :‌

ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಅಸ್ಸಾಂ ಮತ್ತು ಅರುಣಾಚಲ ಪ್ರದೇಶ ಸರ್ಕಾರಗಳು ಎರಡು ರಾಜ್ಯಗಳ ಅಂತರ ಗಡಿ ವಿವಾದ ಇತ್ಯರ್ಥದ ಒಪ್ಪಂದಕ್ಕೆ ಸಹಿ ಹಾಕಿವೆ .

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅರುಣಾಚಲ ಪ್ರದೇಶ ಸಹವರ್ತಿ ಪ್ರೇಮಾ ಖಂಡು ತಿಳುವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದ್ದಾರೆ.

ಇಂದು ನಾವು ಅಭಿವೃದ್ಧಿ ಹೊಂದಿದ, ಶಾಂತಿಯುತ ಮತ್ತು ಸಂಘರ್ಷ ಮುಕ್ತ ಈಶಾನ್ಯ ಸ್ಥಾಪನೆಗೆ ಮೈಲಿಗಲ್ಲನ್ನು ದಾಟಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಸಚಿವ ಅಮಿತ್ ಶಾ ಹೇಳಿದ್ದಾರೆ.

ಗಡಿ ಒಪ್ಪಂದವನ್ನು ಐತಿಹಾಸಿಕ ಎಂದು ಕರೆದ ಅಮಿತ್ ಶಾ, ಎರಡು ರಾಜ್ಯಗಳ ನಡುವಿನ ದಶಕದ ವಿವಾದಗಳನ್ನು ಕೊನೆಗೊಳಿಸಲು ಒಪ್ಪಂದವು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.

ಗಡಿ ಒಪ್ಪಂದವು ದೊಡ್ಡ ಮತ್ತು ಯಶಸ್ವಿ ಕ್ಷಣವಾಗಿದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಕರೆದರೆ, ಅರುಣಾಚಲ ಪ್ರದೇಶದ ಸಿಎಂ ಪೆಮಾ ಖಂಡು ಕೂಡ ಐತಿಹಾಸಿಕ ಕ್ಷಣವನ್ನು ಬಣ್ಣಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!