ದಿನಭವಿಷ್ಯ | ಈ ರಾಶಿಯವರ ಪಾಲಿಗೆ ಇಂದು ವಿಶಿಷ್ಟ ದಿನ,  ಮಹತ್ವದ ಬೆಳವಣಿಗೆ ಘಟಿಸಲಿದೆ

ಹೊಸದಿಗಂತ ಡಿಜಿಟಲ್ ಡೆಸ್ಕ್‌
ಮೇಷ
ಅಧಿಕ ಕೆಲಸದೊತ್ತಡ. ನಿಮ್ಮ ಸಮಯವೆಲ್ಲವೂ ಅದರಲ್ಲಿಯೇ ಮುಗಿಯುವುದು. ಆರ್ಥಿಕ ವ್ಯವಹಾರಗಳನ್ನು ಎಚ್ಚರಿಕೆಯಿಂದ ನಿಭಾಯಿಸಬೇಕು.

ವೃಷಭ
ಹೆಚ್ಚು ಶ್ರಮ ಪಟ್ಟರೆ ಮಾತ್ರ ಉದ್ದೇಶ ಈಡೇರುವುದು. ಬೇಕಾಬಿಟ್ಟಿ ಕಾರ್ಯ ಫಲ ನೀಡದು. ಸಂಗಾತಿ ಜತೆಗೆ ಹೊಂದಾಣಿಕೆಯ ಕೊರತೆ.

ಮಿಥುನ
ನೀವು ನಿರೀಕ್ಷಿಸದ ಖರ್ಚು ಒದಗಿ ಬರುವುದು. ದೈಹಿಕ ಕಿರಿಕಿರಿ ಬಾಧಿಸಬಹುದು. ಒತ್ತಡದ ಕಾರ್ಯದಿಂದ ಹೊರಬಂದು ವಿರಾಮ ಪಡೆಯಿರಿ.

ಕಟಕ
ನಿಮ್ಮ ಪಾಲಿಗೆ ವಿಶಿಷ್ಟ ದಿನ.  ಮಹತ್ವದ ಬೆಳವಣಿಗೆ ಸಂಭವ. ಕೌಟುಂಬಿಕ ವ್ಯವಹಾರ ತಾಳ್ಮೆಯಿಂದ ನಿಭಾಯಿಸಿ, ಸಂಘರ್ಷ ತಪ್ಪಿಸಿರಿ.

ಸಿಂಹ
ಎಂದಿಗಿಂತ ಹೆಚ್ಚು ಹೊಣೆಗಾರಿಕೆ ಹೆಗಲೇರುವುದು. ಸರಿಯಾದ ಯೋಜನೆಯಿಂದ ಎಲ್ಲವನ್ನು ಸರಿಯಾಗಿ ನಿಭಾಯಿಸಬಹುದು.

ಕನ್ಯಾ
ಮನೆ ಮತ್ತು ಕಚೇರಿ ಎರಡೂ ಕಡೆ ಅಧಿಕ ಕೆಲಸ. ನಿರಾಳ ಮನಸ್ಸಿನಿಂದ ಕಾರ್ಯವೆಸಗಿ. ಅನವಶ್ಯ ಒತ್ತಡಕ್ಕೆ ಒಳಗಾಗದಿರಿ. ಆರ್ಥಿಕ ಸುಧಾರಣೆ.

ತುಲಾ
ವೃತ್ತಿಯಲ್ಲಿ ನಿಮಗೆ ಪೂರಕ ಬೆಳವಣಿಗೆ. ಕೆಲವು ಅಡ್ಡಿಗಳ ನಿವಾರಣೆ. ಎಲ್ಲರ ಸಹಕಾರ ಲಭ್ಯ. ಕೌಟುಂಬಿಕ ಪರಿಸರ ಸೌಹಾರ್ದದಾಯಕ.

ವೃಶ್ಚಿಕ
ಸಂಬಂಧದಲ್ಲಿ ಕಿರಿಕಿರಿ ಮೂಡದಂತೆ ಎಚ್ಚರ ವಹಿಸಿ. ವಾದಕ್ಕೆ ಅವಕಾಶ ಕೊಡದಿರಿ. ಸರಿಯಾದ ಸಮಯಕ್ಕೆ ಆಹಾರ ಸೇವಿಸಿರಿ. ಇಲ್ಲವಾದರೆ ಹೊಟ್ಟೆ ಸಮಸ್ಯೆ.

ಧನು
ಕೌಟುಂಬಿಕವಾಗಿ ತುಸು ಉದ್ವಿಗ್ನತೆ ಇದ್ದರೂ ದಿನದ ಅಂತ್ಯಕ್ಕೆ ಎಲ್ಲವೂ ಸರಿಯಾಗುವುದು. ಅಜೀರ್ಣದಂತಹ ಸಮಸ್ಯೆ ಕಾಡಬಹುದು. ಹಿತಮಿತ ಆಹಾರವಿರಲಿ.

ಮಕರ
ದೈನಂದಿನ ಕಾರ್ಯದಲ್ಲಿ ಎಡರುತೊಡರು ಎದುರಿಸುವಿರಿ. ಇದರಿಂದ ಕಾರ್ಯವು ನೀವು ಬಯಸಿದಂತೆ ಸಾಗದು. ತಾಳ್ಮೆಯಿಂದ ವ್ಯವಹರಿಸಿರಿ.

ಕುಂಭ
ವೃತ್ತಿಯಲ್ಲಿ ಕೆಲಸವು ಸುಗಮವಾಗಿ ಸಾಗಲಾರದು. ಕೆಲವರು ನಿಮ್ಮ ಮನಶ್ಯಾಂತಿ ಕದಡುತ್ತಾರೆ. ಕೊಟ್ಟ ವಾಗ್ದಾನ ಈಡೇರಿಸಲು ಗಮನ ಕೊಡಿ.

ಮೀನ
ಕೆಲಸದಲ್ಲಿ ತಪ್ಪುಗಳು ಘಟಿಸಬಹುದು. ಅದನ್ನು ಮುಂಚಿತ ವಾಗಿ ಕಂಡುಕೊಂಡು ನಿವಾರಿಸಿ. ಕೌಟುಂಬಿಕ ವ್ಯವಹಾರದಲ್ಲಿ  ಗೊಂದಲ ಸೃಷ್ಟಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!