ದಿನಭವಿಷ್ಯ : ನಿಮ್ಮ ಪ್ರೀತಿಗೆ ಪುನರುಜ್ಜೀವ ನೀಡಲು ಸಕಾಲವಿದು!

ಮೇಷ
ಸಮಸ್ಯೆ ಪರಿಹರಿಸುವ ಮನೋಭಾವ ಇಂದು ನಿಮ್ಮದು. ಅಂತಹ ಪ್ರಯತ್ನ ಸಫಲ. ಸಂಬಂಧದಲ್ಲಿ ಪ್ರಾಮಾಣಿಕತೆ ಇರಲಿ. ವಂಚನೆ ಬೇಡ.

ವೃಷಭ
ವೃತ್ತಿ ಬದುಕಿನಲ್ಲಿ ಉನ್ನತಿ ಕಾಣುವಿರಿ. ಆರ್ಥಿಕ ಅಭಿವೃದ್ಧಿ. ಹೊಸ ವಿಷಯಗಳನ್ನು ಕಲಿಯುವ ಉತ್ಸಾಹ. ಕೌಟುಂಬಿಕ ಪರಿಸರ ಉಲ್ಲಾಸದಾಯಕ.

ಮಿಥುನ
ಕಾರ್ಯದಲ್ಲಿ ಹೆಚ್ಚು ಆಸ್ಥೆ ವಹಿಸಿ. ತಪ್ಪುಗಳಾಗುವ ಸಾಧ್ಯತೆಯಿದೆ. ಅದನ್ನು ನಿವಾರಿಸಿ. ಅವಶ್ಯ ವಿಷಯದಲ್ಲಿ ಇತರರ ಸಲಹೆ ಪಡೆಯಲು ಹಿಂಜರಿಯದಿರಿ.

ಕಟಕ
ಇಂದು ನಾಯಕರಂತೆ ವರ್ತಿಸಿ, ನಿರ್ಧಾರ ತಳೆಯುವಲ್ಲಿ ಮುಂಚೂಣಿ ವಹಿಸಿ. ನಿಮ್ಮ ಮಾತನ್ನು ಇತರರು ವಿಧೇಯರಾಗಿ ಕೇಳುವ ದಿನವಿದು.

ಸಿಂಹ
ನಿಮಗೆ ಪೂರಕ ದಿನ. ಆದರೆ ನಿಮ್ಮ ನಿರ್ಧಾರ ಅಹಿತಕರ ಫಲಿತಾಂಶ ನೀಡದಂತೆ ಎಚ್ಚರ ವಹಿಸಿ.ಇತರರ ಜತೆ ಸಂವೇದನಾಶೀಲರಾಗಿ ವರ್ತಿಸಿರಿ.

ಕನ್ಯಾ
ನಿಮ್ಮ ಪ್ರೀತಿಗೆ ಪುನರುಜ್ಜೀವ ನೀಡಲು ಸಕಾಲ. ಕೆಟ್ಟಿರುವ ಸಂಬಂಧ ಮತ್ತೆ ಸರಿಪಡಿಸಿ. ಇತರರ ಒತ್ತಡಕ್ಕೆ ಮಣಿಯದಿರಿ. ಎಲ್ಲ ಸರಿಯಾಗುವುದು.

ತುಲಾ
ಇತರರ ಜತೆಗಿನ ನಿಮ್ಮ ಭಾವನೆ ವ್ಯಕ್ತಪಡಿಸಲು ಮುಜುಗರ ಬೇಡ. ಸೂಕ್ತ ಸ್ಪಂದನೆ ದೊರಕಲಿದೆ. ಖಾಸಗಿ ಬದುಕಿನ ಸಮಸ್ಯೆ ಪರಿಹಾರ ಕಾಣುವುದು.

ವೃಶ್ಚಿಕ
ವೃತ್ತಿಯಲ್ಲಿ ಕೆಲವು ಸಮಸ್ಯೆ ಉಂಟಾದೀತು.ಅದನ್ನು ಪರಿಹರಿಸಲು ವಿವೇಕ ಬೇಕು. ದುಡುಕಿನ ಪ್ರತಿಕ್ರಿಯೆ ತೋರಬೇಡಿ. ಎಲ್ಲರ ಜತೆ ಹೊಂದಾಣಿಕೆ ಮುಖ್ಯ.

ಧನು
ವೃತ್ತಿ ಮತ್ತು ಖಾಸಗಿ ಬದುಕು ಎರಡರಲ್ಲೂ ನಿಮಗೆ ಪೂರಕ ಬೆಳವಣಿಗೆ. ಇತರರು ನಿಮ್ಮನ್ನು ಸರಿಯಾಗಿ ಅರಿತುಕೊಳ್ಳುವರು. ಗೊಂದಲ ನಿವಾರಣೆ.

ಮಕರ
ಇಂದು ಯಶಸ್ಸು ನಿಮಗೆ ಸುಲಭವಾಗಿ ದೊರಕಲಿದೆ. ಹೆಚ್ಚು ಕಷ್ಟ ಪಡುವ ಅಗತ್ಯವಿಲ್ಲ. ಇತರರು ನಿಮ್ಮ ಮಾತು ಪಾಲಿಸುವರು. ಕೌಟುಂಬಿಕ ಸೌಹಾರ್ದ.

ಕುಂಭ
ಕೆಲಸದ ಒತ್ತಡ ಅಧಿಕ. ನೀವು ಶಾಂತವಾಗಿ, ತಾಳ್ಮೆಯಿಂದ ವರ್ತಿಸಬೇಕು. ಇಲ್ಲವಾದರೆ ಸಂಘರ್ಷದ ಸ್ಥಿತಿ ನಿರ್ಮಾಣವಾದೀತು.

ಮೀನ
ಬಾಕಿಯಿದ್ದ ಕೆಲವು ಕಾರ್ಯ ಇಂದು ಪೂರೈಸುವ ಅವಕಾಶ.  ಮೊದಲಾಗಿ ನಿಮ್ಮ ಉದಾಸೀನತೆ ತೊಡೆಯಬೇಕು. ಕಾರ್ಯಶೀಲರಾಗಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!