ಕಾರು-ಸ್ಕೂಟರ್ ನಡುವೆ ಭೀಕರ ಅಪಘಾತ: ಸಹೋದರರ ದಾರುಣ ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾರು ಹಾಗೂ ಸ್ಕೂಟಿ ಮಧ್ಯೆ ಕಾರ್ಕಳ ತಾಲೂಕು ನಂದಳಿಕೆ ಗ್ರಾಮದ ಮಾವಿನಕಟ್ಟೆ ಎಂಬಲ್ಲಿ‌ ಇಂದು ಭೀಕರವಾಗಿ ಅಪಘಾತದಲ್ಲಿ ಸಹೋದರ ಇಬ್ಬರ ದಾರುಣ ಸಾವು ಸಂಭವಿಸಿದೆ.
ಸ್ಕೂಟಿ ಸವಾರರಾದ ನಿಟ್ಟೆ ಶಿವಛಾಯಾ ಎಲೆಕ್ಟ್ರಿಕಲ್ ಮಾಲಕ, ಬೆಳ್ಮಣ್‌ ಜೇಸಿ ಕೋಶಾಧಿಕಾರಿ ನಂದಳಿಕೆಯ ಸಂದೀಪ್ ಕುಲಾಲ್ (25) ಹಾಗೂ ಅವರ ಅಣ್ಣ ಜಿಮ್ ಟ್ರೈನರ್‌ ಆಗಿದ್ದ ಸತೀಶ್‌ ಕುಲಾಲ್‌ (33) ಮೃತಪಟ್ಟ ದುರ್ದೈವಿಗಳು.
ನಂದಳಿಕೆಯಿಂದ ಕೆದಿಂಜೆ ಸಾಗುತ್ತಿದ್ದ ಸ್ಕೂಟಿಗೆ ಪಡುಬಿದ್ರೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಕಾರು ನಡುವೆ ಮಾವಿನಕಟ್ಟೆ ಮುಖ್ಯರಸ್ತೆಯಲ್ಲಿಯಲ್ಲಿ ಡಿಕ್ಕಿಯಾಗಿದೆ.ಡಿಕ್ಕಿಯ ರಭಸಕ್ಕೆ ಸಂದೀಪ್‌ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡ ಸತೀಶ್‌ ಅವರು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!