ದಿನಭವಿಷ್ಯ| ಕಾಲಕ್ಕೆ ಮಹತ್ವ ಕೊಡಬೇಕು ಎಂಬುದು ಇಂದು ನಿಮಗೆ ಅರಿವಾಗಲಿದೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ಕಾಲಕ್ಕೆ ಮಹತ್ವ ಕೊಡಬೇಕು ಎಂಬುದು ಇಂದು ನಿಮಗೆ ಅರಿವಾಗಲಿದೆ. ಕಾಲ ವ್ಯರ್ಥ ಮಾಡಿದ್ದರ ಅರಿವು ಉಂಟಾಗಲಿದೆ. ಮಾನಸಿಕ ಒತ್ತಡ.

ವೃಷಭ
ವೃತ್ತಿ ಮತ್ತು ಕುಟುಂಬದ ಮಧ್ಯೆ ಸಮತೋಲನ ಸಾಧಿಸಬೇಕು. ಯಾವುದೇ ಒಂದನ್ನು ಕಡೆಗಣಿಸಬೇಡಿ.ಆರ್ಥಿಕ ಒತ್ತಡ.

ಮಿಥುನ
ಮನೆಯಲ್ಲಿ ನೆಮ್ಮದಿ. ಕೆಲ ದಿನಗಳ ಸಂಕಷ್ಟ ಪರಿಹಾರವಾದ ನಿರಾಳತೆ. ವೃತ್ತಿಯಲ್ಲಿ ಅಪೇಕ್ಷಿತ ಪ್ರಗತಿ. ಒಟ್ಟಿನಲ್ಲಿ  ಇಂದು ತೃಪ್ತಿಕರ ದಿನ.

ಕಟಕ
ಮುಂಜಾನೆಯ ಅವಧಿ ಒತ್ತಡದಿಂದ ಕಳೆಯುವಿರಿ. ನಿರ್ದಿಷ್ಟ ಸಮಯದೊಳಗೆ ಕೆಲಸ ಪೂರೈಸುವ ಒತ್ತಡ. ಸಂಜೆ ವೇಳೆಗೆ ಎಲ್ಲವೂ ಸುಸೂತ್ರ.

ಸಿಂಹ
ದೈನಂದಿನ ಕಾರ್ಯ ದಿಂದ ವಿಮುಖವಾಗಿ ಕಾಲ ಕಳೆಯಲು ಬಯಸುವಿರಿ. ಪ್ರಯಾಣ ಹೊರಡುವು ದಾದಲ್ಲಿ ತುಸು ಎಚ್ಚರದಿಂದಿರಿ.

ಕನ್ಯಾ
ವೃತ್ತಿಯಲ್ಲಿ ಉತ್ತಮ ಪ್ರಗತಿ. ನಿಮ್ಮ ಉದ್ದೇಶ ಈಡೇರುವುದು. ಪ್ರೋತ್ಸಾಹ ಗಳಿಸುವಿರಿ.  ಕೌಟುಂಬಿಕವಾಗಿ ಸಂತೋಷದ ವಾತಾವರಣ.

ತುಲಾ
ಕೆಲವಾರು ವಿಷಯ ಗಳನ್ನು ಇಂದೇ ಇತ್ಯರ್ಥ ಪಡಿಸಬೇಕಾದ ಒತ್ತಡ. ಸಮಸ್ಯೆ ಬಗೆಹರಿಸಲು ಯತ್ನಿಸಿದಷ್ಟೂ ಅದರಲ್ಲೇ ಸಿಕ್ಕಿ ಹಾಕಿಕೊಳ್ಳುವಿರಿ.

ವೃಶ್ಚಿಕ
ಎಲ್ಲರ ಜತೆ ಸೇರುವ ಮನಸ್ಸು ಇಂದು ಇಲ್ಲವಾಗುವುದು. ಏಕಾಂಗಿತನ ಹೆಚ್ಚು ಬಯಸುವಿರಿ. ಅದಕ್ಕೆ ಕಾರಣ ನಿಮ್ಮ ಮನದಲ್ಲಿರುವ ನೋವು.

ಧನು
ಅವಶ್ಯವಿದ್ದಲ್ಲಿ ನಿಮ್ಮ ಅಧಿಕಾರವನ್ನು ಸ್ಥಾಪಿಸಲು ಹಿಂಜರಿಯ ಬೇಡಿ. ಕೆಲ ವಿಷಯಗಳಲ್ಲಿ ಕಠಿಣ ನಿರ್ಧಾರ ಅವಶ್ಯ ಎಂಬುದರಿಯಿರಿ.

ಮಕರ
ಮನಃಶ್ಶಾಂತಿಗೆ ಹಾತೊರೆಯುತ್ತೀರಿ. ಹೇಳಲಾಗದ ದುಗುಡ ನಿಮ್ಮನ್ನು ಕಾಡುತ್ತಿದೆ. ಆಪ್ತರಲ್ಲಿ ಮನಬಿಚ್ಚಿ ಮಾತನಾಡುವುದು ಸಮಾಧಾನ ತಂದೀತು.

ಕುಂಭ
ನಿಮ್ಮ ಕಾರ್‍ಯವನ್ನು ಪುನರ್ ರೂಪಿಸ ಬೇಕಾದ ಅಗತ್ಯ ಬಿದ್ದೀತು. ಹಿಡಿದ ಕಾರ್‍ಯ ಸಫಲವಾಗದು. ಕೌಟುಂಬಿಕ ಒತ್ತಡ ದಿಂದ ನೆಮ್ಮದಿ ಹಾಳು.

ಮೀನ
ಸಾಮಾಜಿಕ ಕಾರ್‍ಯದಲ್ಲಿ ಹೆಚ್ಚು ತೊಡಗುವಿರಿ. ಕೆಲವರ ವರ್ತನೆ ಅಸಹನೀಯ ಎನಿಸಿದರೂ ತಾಳಿಕೊಳ್ಳಬೇಕಾದ ಅನಿವಾರ್ಯತೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!