ದಿನಭವಿಷ್ಯ| ಹತಾಶೆ ಬೇಡ, ನೀವು ನಿಮ್ಮದೇ ಮಾರ್ಗದಲ್ಲಿ ಮುನ್ನಡೆಯಿರಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಮೇಷ
ವೃತ್ತಿಯಲ್ಲಿ ನಿಮ್ಮ ಕುಶಲತೆಯನ್ನು ಇತರರು ಕಡೆಗಣಿಸುತ್ತಾರೆ. ಹತಾಶೆ ಬೇಡ. ನೀವು ನಿಮ್ಮದೇ ಮಾರ್ಗದಲ್ಲಿ ಮುನ್ನಡೆಯಿರಿ. ಕೌಟುಂಬಿಕ ಬೆಂಬಲ.

ವೃಷಭ
ಸಂಬಂಧದಲ್ಲಿ ಹೊಸ ಗಾಳಿ ಬೀಸಲಿದೆ. ಆತ್ಮೀಯರೊಬ್ಬರನ್ನು ಹೊಸ ದೃಷ್ಟಿಯಿಂದ ನೋಡಲು ಆರಂಭಿಸುವಿರಿ. ಮಾನಸಿಕ ಮಿಶ್ರಭಾವ.

ಮಿಥುನ
ಕೆಲವರು ನಿಮ್ಮನ್ನು ಅರ್ಥ ಮಾಡಿಕೊಳ್ಳ ಲಾರರು. ಅವರಿಗೆ ಅರ್ಥ ಮಾಡಿಸುವ ಪ್ರಯತ್ನ ಬಿಟ್ಟುಬಿಡಿ. ಸರಿಯಾದುದನ್ನು ಮಾಡುತ್ತಾ ಹೋಗಿ.

ಕಟಕ
ನಿಮ್ಮ ಕಾರ್ಯವನ್ನು ಭಾವನಾತ್ಮಕತೆಯಿಂದ ಮಾಡಿ. ಉಳಿದವರ ಅನಿಸಿಕೆಗೆ ಬೆಲೆ ಕೊಡದಿರಿ.  ಟೀಕಿಸುವವರು ಇದ್ದೇ ಇರುತ್ತಾರೆ.

ಸಿಂಹ
ವೃತ್ತಿಯಲ್ಲಿ ಉದ್ವಿಗ್ನ ಸ್ಥಿತಿ. ಅದನ್ನು ಶಮನ ಮಾಡಲು ಪೂರ್ಣ ಗಮನ ಕೊಡಬೇಕಾಗುವುದು. ಇತರರ ಸಹಕಾರ ಸಿಗಲಾರದು.

ಕನ್ಯಾ
ಹೊಟ್ಟೆಗೆ ಸಂಬಂಧಿಸಿದ ಅಸೌಖ್ಯ ಕಾಡಬಹುದು. ಪರಿಹಾರ  ಮಿತಾಹಾರ ಸೇವನೆ. ವ್ಯಕ್ತಿಯೊಬ್ಬರ ಬಗ್ಗೆ ಭಾವನಾತ್ಮಕ ಬಂಧ ಬೆಳೆಸುವಿರಿ.

ತುಲಾ
ನಿಮ್ಮ ಜೀವನದಲ್ಲಿ ಕೆಲವು ಬದಲಾವಣೆ ತರಲು ಯೋಜಿಸುವಿರಿ. ಅದನ್ನು ತಕ್ಷಣಕ್ಕೆ ಕಾರ್ಯರೂಪಕ್ಕೆ ತರುವುದು ಮುಖ್ಯ. ಕೌಟುಂಬಿಕ ಸಹಕಾರ.

ವೃಶ್ಚಿಕ
ಕೆಲವು ವಿಷಯಗಳು ಮನಸ್ಸಿನ ನೆಮ್ಮದಿ ಕದಡುತ್ತವೆ. ಅದರ ಬಗ್ಗೆ ಚಿಂತಿಸುತ್ತಾ ಕೂರುವುದಕ್ಕಿಂತ ಅದರ ಪರಿಹಾರಕ್ಕೆ ಯೋಜನೆ ರೂಪಿಸಿರಿ.

ಧನು
ಆಹಾರ ಸೇವನೆಯಲ್ಲಿ ಕಾಳಜಿ ವಹಿಸಿ. ಸ್ವಾಸ್ಥ್ಯ ಕೆಡಿಸುವಂತಹ ಆಹಾರ ಬಿಟ್ಟುಬಿಡಿ. ಆಪ್ತರೊಂದಿಗೆ ಹೆಚ್ಚು ಕಾಲ ಕಳೆಯುವ ಯೋಜನೆ ಹಾಕಿರಿ.

ಮಕರ
ವೃತ್ತಿಯಲ್ಲಿ ನಿಮ್ಮ ವಿರೋಧಿಯಾಗಿರುವ ಜನರ ಬಗ್ಗೆ ಎಚ್ಚರದಿಂದಿರಿ. ಹಿರಿಯರ ಜತೆ ಸಮಸ್ಯೆ ಉಂಟಾದೀತು. ಸಹನೆಯಿಂದ ವರ್ತಿಸಿ.

ಕುಂಭ
ಕೆಲಸಮಯದಿಂದ ಮನದಲ್ಲಿ ಉಂಟಾಗಿದ್ದ ಗೊಂದಲ ಇಂದು ಪರಿಹಾರ ಕಾಣುವುದು.  ಕೆಲಸದ ಮೇಲೆ ಏಕಾಗ್ರತೆ ಮೂಡಿಸಲು ಇದು ಸಕಾಲ.

ಮೀನ
ದಿನವಿಡೀ ಒಂದಿಲ್ಲೊಂದು ಕೆಲಸ ದಲ್ಲಿ ಮಗ್ನರಾಗುವಿರಿ. ಪರಿಸ್ಥಿತಿಗೆ ತಕ್ಕಂತೆ ವರ್ತಿಸಿರಿ. ಜಿಗುಟು ನಿಲುವು ತಳೆದರೆ ನಿಮಗೇ ಹಾನಿಕರ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!