ದಿನಭವಿಷ್ಯ| ಉದ್ವಿಗ್ನತೆಗೆ ಒಳಗಾಗದೆ ಸಂಯಮದಿಂದ ವರ್ತಿಸುವುದು ಒಳಿತು

 

ಮೇಷ
ವೃತ್ತಿಯಲ್ಲಿ ಇಂದು ಅಹಿತಕರ ಬೆಳವಣಿಗೆ. ಅದರಿಂದ ಉದ್ವಿಗ್ನತೆ ಸೃಷ್ಟಿಯಾದೀತು. ಆದರೂ ನೀವು ಸಂಯಮದಿಂದ ವರ್ತಿಸಬೇಕು.

ವೃಷಭ
ನಿಮ್ಮ ಕಾರ್ಯವನ್ನು ಆದ್ಯತೆಯಿಂದ ಮಾಡಿ. ಫಲ ಸಿಕ್ಕೇ ಸಿಗುವುದು.  ಇತರರ ಜತೆ ತುಲನೆ ಮಾಡಿಕೊಂಡು ನಿಮ್ಮ ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ.

ಮಿಥುನ
ನಿರೀಕ್ಷೆಗೆ ತಕ್ಕಂತೆ ಕಾರ್ಯ ಸಾಗದಿರ ಬಹುದು. ಹಾಗೆಂದು ಹತಾಶರಾಗುವ ಅಗತ್ಯವಿಲ್ಲ. ನಿಮಗೆ ಪ್ರತಿಕೂಲವಾದುದು ಘಟಿಸಲಾರದು.

ಕಟಕ
ನಿಮ್ಮ ನಿರೀಕ್ಷೆಯ ಪ್ರಕಾರ ವ್ಯವಹಾರ ಸಾಗುವುದು. ಎಲ್ಲವೂ ನಿಮಗೆ ಪೂರಕವಾಗಿಯೇ ನಡೆಯುವುದು. ಹಾಗಾಗಿ ಇಂದು ಚಿಂತೆಯ ಕಾರಣವಿಲ್ಲ.

ಸಿಂಹ
ಕಡಿಮೆ ಅವಧಿಯಲ್ಲೆ ಹೆಚ್ಚು ಕಾರ್ಯ ಮಾಡುವಿರಿ. ಇತರರ ಜತೆ ನಿಮ್ಮ ಚಿಂತನೆ ಹಂಚಿಕೊಳ್ಳುವಲ್ಲಿ ಹಿಂಜರಿಕೆ ಬೇಡ. ಉತ್ತೇಜನ ದೊರಕುವುದು.

ಕನ್ಯಾ
ಕಾರ್ಯವೆಸಗದೆ ಫಲ ಸಿಗಲಾರದು. ಏನೂ ಮಾಡದೆ ಎಲ್ಲವೂ ನಾನು ಬಯಸಿದಂತೆ ಆಗಬೇಕು ಎಂದು ಬಯಸಲಾಗದು. ಇದು ನಿಮಗಿಂದು ಅನ್ವಯ.

ತುಲಾ
ಎಲ್ಲರ ಗಮನ ಸೆಳೆಯುವ ನಿರ್ವಹಣೆ ತೋರುವಿರಿ. ಕಾರ್ಯದಲ್ಲಿ ಯಶಸ್ಸು. ದಿನದಂತ್ಯಕ್ಕೆ ದೈಹಿಕವಾಗಿ ಬಸವಳಿಯುವ ಸಾಧ್ಯತೆಗಳಿವೆ.

ವೃಶ್ಚಿಕ
ಕೌಟುಂಬಿಕ ಪರಿಸರದಲ್ಲಿ ಹೆಚ್ಚು ಆನಂದ ಕಾಣುವಿರಿ. ಕೌಟುಂಬಿಕ ಕಾರ್ಯಗಳೂ ನಿಮ್ಮ ಆಸಕ್ತಿ ಕೆರಳಿಸುವವು. ಖರ್ಚು ಹೆಚ್ಚುವಂತಹ ಬೆಳವಣಿಗೆ.

ಧನು
ಕೆಲವು ಬೆಳವಣಿಗೆ ಮಾನಸಿಕ ಒತ್ತಡ ಸೃಷ್ಟಿಸುತ್ತದೆ. ಆದರೆ ಅದು ಅಲ್ಪಕಾಲೀನ. ದಿನದ ಅಂತ್ಯಕ್ಕೆ ಮನಸ್ಸು ನಿರಾಳವಾಗುವ ಪ್ರಸಂಗ ಉದ್ಭವಿಸುವುದು.

ಮಕರ
ನೀವು ಅನುಕೂಲಕರ ಎಂದು ಭಾವಿಸಿದ ಪರಿಸ್ಥಿತಿ ನಿಮಗೆ ಪ್ರತಿಕೂಲವಾಗಿ ತಿರುಗಬಹುದು. ಅದನ್ನು ಎದುರಿಸಲು ಸಿದ್ಧರಾಗಿರಿ.

ಕುಂಭ
ಸಣ್ಣಪುಟ್ಟ ಅಸೌಖ್ಯ ಕಾಡಬಹುದು.ಅದರಿಂದ ದೇಹಾಲಸ್ಯ. ವೃತ್ತಿಯಲ್ಲಿ ಕೆಲವರ ಅಸಹಕಾರ. ಆದರೆ ನಿಮ್ಮ ಕಾರ್ಯಗಳು ನಿರ್ವಿಘ್ನ.

ಮೀನ
ಸಂಬಂಧದ ಕಹಿ ಮರೆತು ಹೊಂದಾಣಿಕೆಯ ಅಧ್ಯಾಯ ಆರಂಭಿಸಿರಿ. ಆರೋಗ್ಯಕರ ಜೀವನಶೈಲಿ ಅಳವಡಿಸಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!